ದಲಿತನ ವರಿಸಿದ್ದಕ್ಕೆ ಹತ್ಯೆಯತ್ನ
ಉ.ಪ್ರ. ಶಾಸಕರ ಪುತ್ರಿಯ ವಿಡಿಯೋ ವೈರಲ್
Team Udayavani, Jul 12, 2019, 5:00 AM IST
ಲಕ್ನೋ: ದಲಿತ ಯುವಕನನ್ನು ವಿವಾಹವಾದ ಕಾರಣಕ್ಕೆ ನಮ್ಮನ್ನು ಕೊಲ್ಲಲು ನನ್ನ ತಂದೆಯೇ ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ (23) ಆರೋಪಿಸಿದ್ದಾರೆ. ಅಜಿತೇಶ್ ಕುಮಾರ್ (29) ಎಂಬುವರ ಜತೆಗೆ ವಿವಾಹವಾಗಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, ತಮಗೆ ಜೀವ ಬೆದರಿಕೆಯಿದೆ ಎಂಬ ಅಂಶವನ್ನೂ ಬಹಿರಂಗಪಡಿಸಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ದಂಪತಿಯು ಪೊಲೀಸ್ ರಕ್ಷಣೆ ಕೇಳುವುದರ ಜೊತೆಗೆ, ಅಲಹಾಬಾದ್ ಹೈಕೋರ್ಟ್ಗೆ ಕೂಡ ಅರ್ಜಿ ಸಲ್ಲಿಸಿದ್ದಾರೆ. ‘ನಮ್ಮನ್ನು ಶಾಂತಿಯುತವಾಗಿ ಜೀವಿಸಲು ಬಿಡಿ. ಸ್ವಇಚ್ಛೆಯಿಂದ ಅಜಿತೇಶ್ ಕುಮಾರ್ ಜತೆಗೆ ವಿವಾಹವಾಗಿದ್ದೇನೆ. ತಂದೆ ಗೂಂಡಾಗಳ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ಅವರಿಂದ ಓಡಿ ಬಸವಳಿದಿದ್ದೇನೆ’ ಎಂದು ಸಾಕ್ಷಿ ಹೇಳಿಕೊಂಡಿದ್ದಾಳೆ.
ಪುತ್ರಿಯ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರಾಜೇಶ್ ಮಿಶ್ರಾ ‘ನಾನಾಗಲಿ, ಕುಟುಂಬದ ಸದಸ್ಯರಾಗಲಿ ಪುತ್ರಿಯ ನಿರ್ಧಾರಕ್ಕೆ ಅಡ್ಡಿ ಬಂದಿಲ್ಲ. ವಿವಾಹವಾಗಿರುವ ಯುವಕನು ನನ್ನ ಮಗಳಿಗಿಂತ 9 ವರ್ಷ ದೊಡ್ಡವನು. ಅಲ್ಲದೆ, ಅವನಿಗೆ ಸರಿಯಾದ ಆದಾಯವೂ ಇಲ್ಲ. ಇದಷ್ಟೇ ನಮ್ಮ ಅಸಮಾಧಾನಕ್ಕೆ ಕಾರಣ. ಪ್ರಾಪ್ತ ವಯಸ್ಕಳಾಗಿರುವ ಅವಳು ನಿರ್ಧಾರ ಕೈಗೊಳ್ಳಲು ಸ್ವತಂತ್ರಳು. ಈ ಬಗ್ಗೆ ಪಕ್ಷದ ವರಿಷ್ಠರಿಗೂ ಸೂಚನೆ ನೀಡಿದ್ದೇನೆ. ‘ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್