5 ಕೋಟಿ ಲಂಚ ಪಡೆದ ಆರೋಪ: ಕೇರಳ ಬಿಜೆಪಿ ನಾಯಕನ ಉಚ್ಚಾಟನೆ
Team Udayavani, Jul 21, 2017, 12:30 PM IST
ತಿರುವನಂತಪುರ : ಭ್ರಷ್ಟಾಚಾರದ ಆರೋಪಗಳಿಗಾಗಿ ಕೇರಳ ಬಿಜೆಪಿ ತನ್ನ ಓರ್ವ ನಾಯಕನ ಉಚ್ಚಾಟನೆ ಮಾಡಿದೆ. ಬಿಜೆಪಿ ನಾಯಕ ಆರ್ ಎಸ್ ವಿನೋದ್ ಖಾಸಗಿ ಆಸ್ಪತ್ರೆಯೊಂದಕ್ಕೆ ಮೆಡಿಕಲ್ ಕೌನ್ಸಿಲ್ನ ಅಕ್ರೆಡಿಟೇಶನ್ ದೊರಕಿಸಿ ಕೊಡುವ ಭರವಸೆ ನೀಡಿ ಐದು ಕೋಟಿ ರೂ. ಲಂಚ ತೆಗೆದುಕೊಂಡಿದ್ದಾರೆಂದು ಆರೋಪಿಸಲಾಗಿದೆ.
ವಿನೋದ್ ಅವರು ರಾಜ್ಯ ಬಿಜೆಪಿ ಸಹಕಾರ ವಿಭಾಗದ ಸಂಚಾಲಕರಾಗಿದ್ದಾರೆ. ಇವರ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಜತೆಗೂಡಿ ಸಂಸತ್ತಿನಲ್ಲಿ ನಿನ್ನೆ ಧ್ವನಿ ಎತ್ತಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ಇದನ್ನು ಅನುಸರಿಸಿ ನಿನ್ನೆ ಗುರುವಾರವೇ ವಿನೋದ್ ಅವರನ್ನು ಹುದ್ದೆಯಿಂದ ಉಚ್ಚಾಟಿಸಲಾಯಿತು.
ಸಂಸತ್ತಿನಲ್ಲಿ ನಿನ್ನೆ ಪಾಲಕ್ಕಾಡ್ನ ಸಿಪಿಐ ಸಂಸದ ಎಂ ಬಿ ರಾಜೇಶ್ ಅವರು ಲೋಕಸಭೆಯಲ್ಲಿ ಈ ಬಗ್ಗೆ ನಿಲುವಳಿ ಗೊತ್ತುವಳಿಯೊಂದನ್ನು ಮಂಡಿಸಿದ್ದರು. ಕೇರಳದಲ್ಲಿ ಇದೊಂದೇ ಅಲ್ಲ, 26ಕ್ಕೂ ಹೆಚ್ಚು ಕಾಲೇಜುಗಳು ಬೇರೆ ಬೇರೆ ಮಾರ್ಗಗಳ ಮೂಲಕ ಎಂಸಿಐ ಮಾನ್ಯತೆಯನ್ನು ಪಡೆದಿವೆ ಎಂದು ಆರೋಪಿಸಿದ್ದರು.
ವಿಶೇಷವೆಂದರೆ ಬುಧವಾರವೇ ಕೇರಳ ಬಿಜೆಪಿ ಆಂತರಿಕ ಸಮಿತಿ ವರದಿ ಸೋರಿ ಹೋಗಿದ್ದು ಸ್ಥಳೀಯ ಪದಾಧಿಕಾರಿಯೊಬ್ಬರು ಖಾಸಗಿ ಆಸ್ಪತ್ರೆಯೊಂದಕ್ಕೆ ಮೆಡಿಕಲ್ ಕೌನ್ಸಿಲ ಆಫ್ ಇಂಡಿಯಾ ಇದರ ಮಾನ್ಯತೆಯನ್ನು ದೊರಕಿಸಲು 5 ಕೋಟಿ ರೂ. ಲಂಚ ತೆಗೆದುಕೊಂಡಿದ್ದಾರೆಂಬ ವಿಷಯ ಬಹಿರಂಗವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ