ಚುನಾವಣೆಯನ್ನು ರೆಫರೆಂಡಂ ಎಂದು ಬಿಜೆಪಿ ಘೋಷಿಸಲಿ : ಕಾಂಗ್ರೆಸ್
Team Udayavani, Jan 31, 2017, 4:48 PM IST
ಚಂಡೀಗಢ : ನೋಟು ಅಪನಗದೀಕರಣದ ಕ್ರಮವು ಭಯೋತ್ಪಾದನೆ, ಕಪ್ಪು ಹಣ, ನಕ್ಸಲ್ವಾದ ಮತ್ತು ಮಾದಕ ದ್ರವ್ಯ ಪಿಡುಗನ್ನು ತಡೆಯುವಲ್ಲಿ ನೆರವಾಗಿದೆ ಎಂಬ ಬಗ್ಗೆ ಬಿಜೆಪಿಗೆ ವಿಶ್ವಾಸವಿದ್ದರೆ ಅದು ಪಂಚರಾಜ್ಯ ವಿಧಾನಸಭಾ ಚುನಾವಣೆಗಳನ್ನು ಜನಮತಗಣನೆ (referendum) ಎಂಬುದಾಗಿ ಘೋಷಿಸಬೇಕು ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ನೋಟು ನಿಷೇಧದ ಕ್ರಮದಿಂದ ದೇಶದಲ್ಲಿ ಅಭದ್ರತೆ ಉಂಟಾಗಿದೆ ಎಂದು ಆರೋಪಿಸಿದ ಸಚಿನ್, “ಕೆಲವು ಬಿಜೆಪಿ ನಾಯಕರು ಕೂಡ ನೋಟು ನಿಷೇಧವು ಒಂದು ವಿಫಲ ಕ್ರಮವಾಗಿರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.
ನೋಟು ನಿಷೇಧ ಕ್ರಮದಿಂದಾಗಿ ಬ್ಯಾಂಕುಗಳ ಮುಂದೆ ಮೈಲುದ್ದ ಕ್ಯೂನಲ್ಲಿ ನಿಂತ ಜನರಲ್ಲಿ 125 ಮಂದಿ ಮೃತಪಟ್ಟಿರುವುದಕ್ಕೆ ಯಾರು ಕಾರಣ ಎಂಬುದನ್ನು ಪ್ರಧಾನಿ ಮೋದಿ ಅವರು ಜನರಿಗೆ ಉತ್ತರಿಸಬೇಕು ಎಂದು ರಾಜಸ್ಥಾನ್ ಪಿಸಿಸಿ ಮುಖ್ಯಸ್ಥರೂ ಆಗಿರುವ ಸಚಿನ್ ಪೈಲಟ್ ಆಗ್ರಹಿಸಿದರು.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ವಿರುದ್ಧ ಚಾಟಿ ಬೀಸಿದ ಸಚಿನ್, ದಿಲ್ಲಿ ಜನರು ಕೊಟ್ಟಿರುವ ಜನಾದೇಶದ ಪ್ರಕಾರ ಸಾಂವಿಧಾನಿಕ ಹೊಣೆಗಾರಿಕೆಯನ್ನು ಕೇಜ್ರಿವಾಲ್ ನಿಭಾಯಿಸುತ್ತಿಲ್ಲ; ದಿಲ್ಲಿ ಮುಖ್ಯಮಂತ್ರಿ ಹಾಗೂ ಎಲ್ಲ ಶಾಸಕರು ಪಂಜಾಬ್ ಮತ್ತು ಗೋವೆಯಲ್ಲಿ ಚುನಾವಣಾ ಪ್ರಚಾರ ನಿರತರಾಗಿದ್ದಾರೆ; ರಾಷ್ಟ್ರ ರಾಜಧಾನಿಯನ್ನು ಅವರು ಕಡೆಗಣಿಸುತ್ತಿದ್ದಾರೆ; ದಿಲ್ಲಿಯ ಸಾರ್ವಜನಿಕರ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?