ಬಿಜೆಪಿ v/s ಎಸ್ ಪಿ; ಗುಜರಾತ್ ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಿದು
ಮೋದಿ ತವರಲ್ಲಿ ತನ್ನದೇ ಆದ ಪ್ರಾಬಲ್ಯ ತೋರಿರುವ ಕಂಧಲ್ ಜಡೇಜಾ
Team Udayavani, Nov 23, 2022, 2:16 PM IST
ಗಾಂಧಿನಗರ : ಗುಜರಾತ್ ನಲ್ಲಿ ವಿಧಾನಸಭಾ ಚುನಾವಣಾ ಕದನ ತೀವ್ರ ರಂಗು ಪಡೆದಿದ್ದು,ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ಬಿಜೆಪಿಯ ಮಹಿಳಾ ಅಭ್ಯರ್ಥಿಯೊಬ್ಬರ ವಿರುದ್ಧ ಕಣದಲ್ಲಿರುವ ಕ್ಷೇತ್ರವೊಂದು ಆರೋಪ-ಪ್ರತ್ಯಾರೋಪಗಳಿಂದ ದೇಶದ ಗಮನ ಸೆಳೆದಿದೆ.
ಕುಟಿಯಾನದಿಂದ ಎಸ್ಪಿ ಅಭ್ಯರ್ಥಿಯಾಗಿ ಕಂಧಲ್ ಜಡೇಜಾ ಅವರು ಸ್ಪರ್ಧಿಸಿದ್ದು, ಜನರಿಗೆ ಮತ ಹಾಕುವಂತೆ ಬೆದರಿಕೆ ಹಾಕುತ್ತಾರೆ. ನಾನು ಯಾರಿಗೂ ಬೆದರಿಕೆ ಹಾಕುವುದಿಲ್ಲ. ನನ್ನ ಮತದಾರರಿಗೆ ನಾನು ಇಷ್ಟಪಟ್ಟರೆ ನನಗೆ ಮತ ನೀಡಿ ಎಂದು ಪ್ರೀತಿಯಿಂದ ಹೇಳುತ್ತೇನೆ. ನನಗೆ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಧೆಲಿಬೆನ್ ಒಡೆದಾರ ಹೇಳಿದ್ದಾರೆ.
‘ಕಂಧಲ್ ಜಡೇಜಾ ವಿರುದ್ಧ ಸ್ಪರ್ಧಿಸಲು ನನಗೆ ಧೈರ್ಯವಿದೆ. ನಾನು ದೊಡ್ಡ ಅಂತರದಲ್ಲಿ ಗೆಲ್ಲುತ್ತೇನೆ…ಕುಟಿಯಾನ ಕ್ಷೇತ್ರದ ಮತದಾರರು ನನ್ನನ್ನು ತಿಳಿದಿದ್ದಾರೆ ಮತ್ತು ಗೌರವಿಸುತ್ತಾರೆ. ನಾನು ಬಡವರನ್ನು ಮತ್ತು ಎಲ್ಲರನ್ನೂ ನೋಡಿಕೊಳ್ಳುತ್ತೇನೆ. ಹಾಗಾಗಿ, ಅವರು ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಧೆಲಿಬೆನ್ ಹೇಳಿದ್ದಾರೆ.
‘2012ರಲ್ಲಿ ಎನ್ಸಿಪಿಯನ್ನು ಇಲ್ಲಿಗೆ ತಂದಾಗ ಯಾರಿಗೂ ಗೊತ್ತಿರಲಿಲ್ಲ. ನಾನು ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದೇನೆ. ಜನ ನನ್ನ ಹೆಸರಿನ ಮೇಲೆ ಮತ ಹಾಕಿದ್ದಾರೆ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ, ಎಲ್ಲರೂ ಅನುಸರಿಸಿದರು ಮತ್ತು ರಾಜೀನಾಮೆ ನೀಡಿದರು. ಗುಜ್ನಲ್ಲಿ ಎನ್ಸಿಪಿ ಮುಗಿದಿದೆ. ನಾನು ಈಗ ಸೈಕಲ್ ತುಳಿಯುತ್ತಿದ್ದೇನೆ’ ಎಂದು ಕುಟಿಯಾನ ಎಸ್ಪಿ ಅಭ್ಯರ್ಥಿ ಕಂಧಲ್ ಜಡೇಜಾ ಹೇಳಿಕೆ ನೀಡಿದ್ದಾರೆ.
‘ಕಂಧಲ್ ಜಡೇಜಾ ಅವರ ಕುಟುಂಬದ ಹಿನ್ನೆಲೆಯನ್ನು ಗಮನಿಸಿದರೆ ಜನರು ಭಯದಿಂದ ಅಥವಾ ಪ್ರೀತಿಯಿಂದ ಮತ ಚಲಾಯಿಸುತ್ತಾರೆಯೇ ?’ಎಂದು ಸುದ್ದಿಗಾರರು ಕೇಳಿದಾಗ,’80-90 ರ ದಶಕದಲ್ಲಿ ನೀವು ಇದನ್ನು ನನ್ನನ್ನು ಕೇಳಿದ್ದರೆ, ನಾನು ಭಯದಿಂದ ಹೇಳುತ್ತಿದ್ದೆ. ಆಗ ಬ್ಯಾಲೆಟ್ ಪೇಪರ್ ಇತ್ತು. ಈಗ ಇವಿಎಂ ಇದೆ. ನನ್ನ ಕೆಲಸದಿಂದ ಮಾತ್ರ ನನಗೆ ಜನರು ನನಗೆ ಮತ ಹಾಕುತ್ತಾರೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ