ಬಿಜೆಪಿ ಲಾಭಕ್ಕಾಗಿ ಕ್ರಿಮಿನಲ್ ಗಳನ್ನು ಬಳಸಿಕೊಳ್ಳುತ್ತದೆ : ಮೆಹಬೂಬಾ ಮುಫ್ತಿ
ಕನ್ಹಯ್ಯಾ ಲಾಲ್ ಹತ್ಯೆಯಿಂದ ಯಾರಿಗೆ ಲಾಭವಾಯಿತು?
Team Udayavani, Jul 4, 2022, 3:30 PM IST
ಶ್ರೀನಗರ : ಪುಲ್ವಾಮಾ ದಾಳಿಯ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ದೇವಿಂದರ್ ಸಿಂಗ್ ಬಿಡುಗಡೆಗೊಳಿಸಿದರು. ದಾಳಿ ನಡೆದಿದ್ದು ಹೇಗೆ? ಅದರಿಂದ ಯಾರಿಗೆ ಲಾಭವಾಯಿತು? ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕ್ರಿಮಿನಲ್ ಅಂಶಗಳಿಗೆ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ ಮತ್ತು ಅವರ ಲಾಭಕ್ಕಾಗಿ, ಅವರ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಯಾವಾಗಲೂ ಸಮಾಜದಲ್ಲಿ ಅವ್ಯವಸ್ಥೆಯನ್ನು ಹರಡಲು ಮತ್ತು ಹಿಂದೂ-ಮುಸ್ಲಿಂ ಉದ್ವಿಗ್ನತೆಯನ್ನು ಸೃಷ್ಟಿಸಲು ಬಯಸುತ್ತದೆ. ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆಯಾದಾಗ, ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ವಿರುದ್ಧವಾಗಿ ನಡೆದರು. ಯಾರಿಗೆ ಲಾಭವಾಯಿತು? ಬಿಜೆಪಿಗಲ್ಲವೇ ಎಂದು ಮುಫ್ತಿ ಕಿಡಿ ಕಾರಿದ್ದಾರೆ.
#WATCH | “…Questions are raised on Pulwama attack. Davinder Singh was released. How did the attack take place? Who benefitted from it? BJP. BJP provides support & patronage to criminal elements & uses them for their benefit, for their propaganda,” says PDP chief Mehbooba Mufti. pic.twitter.com/LVh41VbJ7M
— ANI (@ANI) July 4, 2022