ಕಾಂಗ್ರೆಸ್ ಚಿಹ್ನೆ ರದ್ದು ಇ.ಸಿ.ಗೆ ಬಿಜೆಪಿ ಮನವಿ
Team Udayavani, Jan 30, 2018, 2:33 PM IST
ನವದೆಹಲಿ: ಕಾಂಗ್ರೆಸ್ಗೆ ನೀಡಲಾಗಿರುವ ಹಸ್ತ ಚಿಹ್ನೆ ವಿರುದ್ಧ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಚುನಾವಣಾ ಆಯೋಗಕ್ಕೆ ಆರು ಪುಟಗಳ ದೂರು ನೀಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಓಮ್ ಪ್ರಕಾಶ್ ರಾವತ್ ಜತೆ ಚರ್ಚೆಯನ್ನೂ ನಡೆಸಿದ್ದಾರೆ.
ಅವರ ಪ್ರಕಾರ ಚುನಾವಣೆ ನಡೆವ 48 ಗಂಟೆಗಳ ಮೊದಲು ಪ್ರಚಾರ ನಿಲ್ಲಬೇಕು. ಇದರ ಜತೆಗೆ ಜನಪ್ರಾತಿನಿಧ್ಯ ಕಾಯ್ದೆಯ 130ನೇ ವಿಧಿಯನ್ವಯ ನಿಗದಿತ ಪಕ್ಷದ ಚಿಹ್ನೆಯನ್ನು ಮತದಾನ ನಡೆಯುವ 100 ಅಡಿ ಅಂತರ ವ್ಯಾಪ್ತಿಯಲ್ಲಿ ಪ್ರದರ್ಶಿಸಬಾರದು ಎಂದು
ಉಲ್ಲೇಖೀಸಲಾಗಿದೆ.
ಆದರೆ ಅದನ್ನು ಉಲ್ಲಂ ಸಲಾಗುತ್ತಿದೆ ಎಂದು ಉಪಾಧ್ಯಾಯ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರು ಮತಕೇಂದ್ರದಲ್ಲಿ ಚುನಾವಣೆ ದಿನದಂದೂ ಹಸ್ತ ಪ್ರದರ್ಶಿಸುತ್ತಾರೆ ಎಂದು ದೂರಿದ್ದಾರೆ.