ಅಕ್ಟೋಬರ್ 31ರಂದು ಬಾನಂಗಳದಲ್ಲಿ “ನೀಲಿ ಚಂದ್ರನ” ವಿಸ್ಮಯ: ಏನಿದು ಹಂಟರ್ ಮೂನ್?
ಇನ್ನು ಮುಂದಿನ ಬ್ಲೂಮೂನ್ 2050ರ ಸೆಪ್ಟೆಂಬರ್ 30ರಂದು ಕಾಣಿಸಲಿದೆ
Team Udayavani, Oct 28, 2020, 12:30 PM IST
ನವದೆಹಲಿ:ನಾವೆಲ್ಲರೂ 2020ರ ಅಕ್ಟೋಬರ್ 31ರಂದು ಬಾನಂಗಳದಲ್ಲಿ ನಡೆಯಲಿರುವ ಅಪರೂಪದ (ಬ್ಲೂ ಮೂನ್) ಚಂದ್ರದರ್ಶನಕ್ಕೆ ಸಾಕ್ಷಿಯಾಗಲಿದ್ದೇವೆ. ಇದು ಒಂದೇ ತಿಂಗಳಿನಲ್ಲಿ ನಡೆಯುವ 2ನೇ ಪೂರ್ಣಚಂದ್ರ ದರ್ಶನವಾಗಿದ್ದು, ಇದನ್ನು ಬ್ಲೂ ಮೂನ್ ಎಂದು ಕರೆಯಲಾಗುತ್ತದೆ.
“ಬ್ಲೂ ಮೂನ್ ಅನ್ನು “ಹಂಟರ್ ಮೂನ್” ಎಂದೂ ಕೂಡಾ ಕರೆಯುತ್ತಾರೆ. ಯಾಕೆಂದರೆ ಚಳಿಗಾಲದಲ್ಲಿ ಬೇಟೆಯಾಡಲು ಹೋಗುವ ಬೇಟೆಗಾರರಿಗೆ ಪೂರ್ಣ ಪ್ರಮಾಣದ ಬೆಳಕನ್ನು (ಪೂರ್ಣ ಚಂದ್ರ) ಚೆಲ್ಲುತ್ತದೆ. ಇದು ಬೇಟೆಗಾರರಿಗೆ ಅನುಕೂಲ ಕಲ್ಪಿಸಿಕೊಡುತ್ತದೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 31ರಂದು ವಿಶ್ವಾದ್ಯಂತ ಈ ಬ್ಲೂಮೂನ್ ದರ್ಶನವಾಗಲಿದೆ. ಅಂದಹಾಗೆ ಬ್ಲೂಮೂನ್ ಅಂದ ಕೂಡಲೇ ನೀಲಿ ಬಣ್ಣದಲ್ಲಿ ಚಂದ್ರ ಗೋಚರಿಸಲಿದ್ದಾನೆ ಎಂದರ್ಥವಲ್ಲ. ಇದು ಅಪರೂಪವಾಗಿ ನಡೆಯುವ ವಿದ್ಯಮಾನವಾಗಿದೆ. ಆಕಾಶದಲ್ಲಿ ಅಪರೂಪಕ್ಕೆ ಎಂಬಂತೆ 2,3 ವರ್ಷಗಳಿಗೊಮ್ಮೆ ನಡೆಯುತ್ತದೆ. 2018ರಲ್ಲಿಯೂ ಬ್ಲೂಮೂನ್ ಗೋಚರಿಸಿತ್ತು.
ಇದನ್ನೂ ಓದಿ:ಉಡುಪಿ ವಿಜಯ ಕುಮಾರ್, ದ.ಕನ್ನಡದ ವೆಲೇರಿಯನ್ ಡಿಸೋಜ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
ನಾಸಾ ಬ್ಲಾಗ್ ನಲ್ಲಿ ವಿವರಿಸಿರುವಂತೆ, ಬ್ಲೂಮೂನ್ (ನೀಲಿ) ಅಂದರೆ ಒಂದೇ ತಿಂಗಳಿನಲ್ಲಿ ಎರಡು ಬಾರಿ ಕಾಣಿಸಿಕೊಳ್ಳಲಿರುವ ಪೂರ್ಣ ಚಂದ್ರ ದರ್ಶನ. ಸಾಂಪ್ರದಾಯಿಕವಾಗಿ 29 ದಿನಗಳ ನಂತರ ಪೂರ್ಣ ಚಂದ್ರ ಕಾಣಿಸಿಕೊಳ್ಳುತ್ತಾನೆ. ಆದರೆ ಅಪರೂಪಕ್ಕೆ ಒಂದೇ ತಿಂಗಳಿನಲ್ಲಿ ಎರಡನೇ ಬಾರಿ ಪೂರ್ಣ ಚಂದ್ರ ಗೋಚರಿಸಲಿದ್ದು, ಅದಕ್ಕೆ ಬ್ಲೂ ಮೂನ್ ಎಂದು ಕರೆಯುತ್ತಾರೆ.
ಅಕ್ಟೋಬರ್ 1ರಂದು ಹುಣ್ಣಿಮೆ ಚಂದ್ರ ಕಾಣಿಸಿಕೊಂಡಿದ್ದು, ಇದೀಗ ಅಕ್ಟೋಬರ್ 31ರಂದು ಎರಡನೇ ಬಾರಿ ಪೂರ್ಣ ಚಂದ್ರ (ಬ್ಲೂಮೂನ್) ಗೋಚರಿಸುತ್ತಿದೆ. ಇನ್ನು ಮುಂದಿನ ಬ್ಲೂಮೂನ್ 2050ರ ಸೆಪ್ಟೆಂಬರ್ 30ರಂದು ಕಾಣಿಸಲಿದೆ ಎಂದು ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ