ಶಾರೂಕ್‌ ಅಕ್ರಮ ಕ್ಯಾಂಟೀನ್‌ ಧ್ವಂಸ


Team Udayavani, Oct 7, 2017, 12:21 PM IST

555.jpg

ಮುಂಬಯಿ:ನಟ ಶಾರೂಕ್‌ ಖಾನ್‌ ತನ್ನ ಸಿನೇಮಾ ನಿರ್ಮಾಣ ಸಂಸ್ಥೆಯಾಗಿರುವ ರೆಡ್‌ ಚಿಲ್ಲೀಸ್‌ನ ಕಚೇರಿಯ ಪಕ್ಕದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕ್ಯಾಂಟೀನ್‌ ಅನ್ನು ಬಎಂಸಿ ನೆಲಸಮಗೊಳಿಸಿದೆ. ಮಲಾಡ್‌ ಪಶ್ಚಿಮದಲ್ಲಿ ರೆಡ್‌ ಚಿಲ್ಲೀಸ್‌ ಕಚೇರಿಯಿದ್ದು, ಇದಕ್ಕೆ ಒತ್ತಿಕೊಂಡಿರುವ ಖಾಲಿ ಟೆರೇಸ್‌ನ್ನು  ಶಾರೂಕ್‌  ಕ್ಯಾಂಟೀನ್‌ ಆಗಿ ಪರಿವರ್ತಿಸಿದ್ದರು. 

ಮಲಾಡ್‌ ಪಶ್ಚಿಮದ ಸುಂದರ್‌ ನಗರದಲ್ಲಿರುವ 16 ಮಹಡಿಯ ಡಿಎಲ್‌ಎಚ್‌ ಪಾರ್ಕ್‌ ಬಿಲ್ಡಿಂಗ್‌ನ ನಾಲ್ಕನೇ ಮಹಡಿಯನ್ನು ಇಡಿಯಾಗಿ ಶಾರೂಕ್‌ ಖರೀದಿಸಿ ಅದನ್ನು ರೆಡ್‌ ಚಿಲ್ಲೀಸ್‌ನ ನಿರ್ಮಾಣ ಪೂರ್ವ ಕೆಲಸಗಳಿಗಾಗಿ ಬಳಸುತ್ತಿದ್ದರು. ಶಾರೂಕ್‌ ಮತ್ತು ಅವರ ಪತ್ನಿ ಗೌರಿ ಖಾನ್‌ ರೆಡ್‌ ಚಿಲ್ಲೀಸ್‌ನ ಮಾಲಕರಾಗಿದ್ದಾರೆ. ನಾಲ್ಕನೇ ಮಹಡಿಗೆ ಒತ್ತಿಕೊಂಡಂತೆ ಇರುವ ಸುಮಾರು 2000 ಚದರ ಅಡಿ ಟೆರೇಸನ್ನು ರೆಡ್‌ ಚಿಲ್ಲೀಸ್‌ ಸಿಬಂದಿಗಳಿಗೆ ಮತ್ತು ಸಂದರ್ಶಕರಿಗೆ ತಿಂಡಿ ಊಟ ಪೂರೈಸುವ ಕ್ಯಾಂಟೀನ್‌ ಆಗಿ ಪರಿವರ್ತಿಸಲಾಗಿತ್ತು. 

ರೆಡ್‌ ಚಿಲ್ಲೀಸ್‌ನಲ್ಲಿ ಸುಮಾರು 316 ಸಿಬಂದಿಗಳಿದ್ದಾರೆ ಹಾಗೂ ನಿತ್ಯ ಅನೇಕ ಸಂದರ್ಶಕರು ಇಲ್ಲಿಗೆ ಬರುತ್ತಿರುತ್ತಾರೆ. ಆದರೆ ಈ ಕ್ಯಾಂಟೀನ್‌ ಬೆಂಕಿಯ ಬಲೆಯಂತಿದೆ. ಯಾವ ಕ್ಷಣದಲ್ಲಾದರೂ ಅಪಾಯಕ್ಕೆ ಆಹ್ವಾನವೀಯಬಹುದು ಎಂದು ಬಿಎಂಸಿ ಎಚ್ಚರಿಸಿತ್ತು. ನೆಲಸಮ ಕಾರ್ಯಾಚರಣೆಗೆ ಹೈಕೋರ್ಟಿನಿಂದ ತಡೆ ತರಲು ಶಾರೂಕ್‌ ಪ್ರಯತ್ನಿಸಿದ್ದರು. ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿದೆ. 

ರೆಡ್‌ ಚಿಲ್ಲೀಸ್‌ ಬಾಡಿಗೆ ಆಧಾರದಲ್ಲಿ ನಾಲ್ಕನೇ ಮಹಡಿಯನ್ನು ತೆಗೆದುಕೊಂಡಿದೆಯೇ ಹೊರತು ಮಾಲಕರಲ್ಲ. ಖಾಲಿ ಟೆರೇಸಿನಲ್ಲಿ ಸಿಬಂದಿಗಳು ಮನೆಯಿಂದ ತಂದು ಬುತ್ತಿಯನ್ನು ಬಿಚ್ಚಿ ಊಟ ಮಾಡುತ್ತಿದ್ದರು. ಆದರೆ ನಗರಪಾಲಿಕೆ ಇದನ್ನೇ ಕ್ಯಾಂಟೀನ್‌ ಎಂದು ತಪ್ಪು ಭಾವಿಸಿ ನೆಲಸಮಗೊಳಿಸಿದೆ ಎಂದು ರೆಡ್‌ ಚಿಲ್ಲೀಸ್‌ ವಕ್ತಾರ ಹೇಳಿದ್ದಾರೆ. 

ಟೆರೇಸ್‌ ಮುಕ್ತವಾಗಿರಬೇಕಿತ್ತು. ಆದರೆ ರೆಡ್‌ ಚಿಲ್ಲೀಸ್‌ ಟೆರೇಸ್‌ಗೆ ಮಾಡು ಕಟ್ಟಿ ಆ ಜಾಗವನ್ನು ಬಳಕೆ ಮಾಡುತ್ತಿತ್ತು. ಇದು ಎಫ್ಎಸ್‌ಸಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ನೆಲಸಮಗೊಳಿಸಿದ್ದೇವೆ ಎಂದು ವಾಡ್‌ ಅಧಿಕಾರಿ ಚಂದಾ ಜಾಧವ್‌ ಹೇಳಿದ್ದಾರೆ. 

ಬಿಎಸಿ ಸಿನೇಮಾ ತಾರೆಯರ ಅಕ್ರಮ ನಿರ್ಮಾಣಗಳನ್ನು ಕೆಡವಿ ಹಾಕುತ್ತಿರುವುದು ಇದೇ ಮೊದಲಲ್ಲ. ಕೆಲ ಸಮಯದ ಹಿಂದೆ ನಟಿ ರಾಣಿ ಮುಖರ್ಜಿ ಮತ್ತು ನಟ ಸೋನು ಸೂದ್‌ಗೆ ಷಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ನೋಟಿಸ್‌ ಜಾರಿಯಾಗಿತ್ತು. ರಾಣಿ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ ಹಾಗೂ ಸೂದ್‌ ತಡೆಯಾಜ್ಞೆ ತಂದಿದ್ದಾರೆ. 

ಇದೇ ವೇಳೆ ಬಿಎಂಸಿ ಸೆಲೆಬ್ರಿಟಿಗಳ ಅಕ್ರಮ ನಿರ್ಮಾಣಗಳನ್ನು ಮಾತ್ರ ಕೆಡವಿ ಹಾಕುವುದರ ಹಿಂದೆ ಪ್ರಚಾರ ಪಡೆದುಕೊಳ್ಳುವ ಉದ್ದೇಶ ಇದೆ ಎಂಬ ಆರೋಪವೂ ಇದೆ. ನಗರಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ತೋರಿಸಿಕೊಳ್ಳಲು ಬಿಎಂಸಿ ಸಿಬಂದಿಗಳ ಸೆಲೆಬ್ರಿಟಿಗಳ ಅಕ್ರಮ ನಿರ್ಮಾಣಗಳನ್ನು ಹುಡುಕಿ ತೆಗೆದು ಧ್ವಂಸ ಮಾಡುತ್ತಿದ್ದಾರೆ. ಆದರೆ ನಗರಾದ್ಯಂತ ಈ ಮಾದರಿಯ ಅಕ್ರಮ ನಿರ್ಮಾಣಗಳು ಅನೇಕ ಇವೆ. ಆದರೆ ಅವುಗಳ ತಂಟೆಗೆ ಹೋಗುವುದಿಲ್ಲ ಎಂದು ಕಾರ್ಯಕರ್ತರೊಬ್ಬರು ದೂರಿದ್ದಾರೆ. 

ಟಾಪ್ ನ್ಯೂಸ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.