ಕೊನೆಗೂ7 ಪರ್ವತಾರೋಹಿಗಳ ಶವಗಳು ಹಿಮಾಲಯದಿಂದ ಕೆಳಕ್ಕೆ
ಐಟಿಬಿಪಿ ಪಡೆ ನಡೆಸಿದ ಮಿಷನ್ ಡೇರ್ಡೆವಿಲ್ಸ್ ಕಾರ್ಯಾಚರಣೆಗೆ ವಾಯುಪಡೆಯ ನೆರವು
Team Udayavani, Jul 4, 2019, 10:03 AM IST
ಪಿತೋರ್ಗಡ: ಹಿಮಾಲಯದಲ್ಲಿ ನಾಪತ್ತೆಯಾಗಿದ್ದ 7 ಪರ್ವತಾರೋಹಿಗಳ ಶವಗಳನ್ನು ಐಟಿಬಿಪಿ ಯೋಧರ ತಂಡ ಕೊನೆಗೂ ಪರ್ವತದಿಂದ ಕೆಳಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಂದಾ ದೇವಿ ಪೂರ್ವ ಪರ್ವತದಲ್ಲಿ ಮಿಷನ್ ಡೇರ್ಡೆವಿಲ್ಸ್ ಹೆಸರಿನಲ್ಲಿ ಐಟಿಬಿಪಿ ಪಡೆಗಳು ಕಾರ್ಯಾಚರಣೆ ನಡೆಸಿದ್ದವು.
ನಂದಾ ದೇವಿ ಪೂರ್ವ ಪರ್ವತದ ಬಳಿ ಹೆಸರಿಲ್ಲದ ಹಿಮಪರ್ವತದಲ್ಲಿ ಹಿಮದಲ್ಲಿ ಹೂತು ಹೋಗಿದ್ದ 7 ಮಂದಿಯ ಶವಗಳನ್ನು 32 ಮಂದಿ ಯೋಧರ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ನಾಪತ್ತೆಯಾಗಿರುವ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪೈಕಿ ಓರ್ವ ಭಾರತೀಯ ಪರ್ವತಾರೋಹಿ ಮತ್ತು ಓರ್ವ ಮಹಿಳೆ ಸೇರಿ 7 ಮಂದಿಯ ಶವಗಳನ್ನು ವಾಯುಪಡೆಯ ಹೆಲಿಕ್ಯಾಪ್ಟರ್ಗಳ ಮೂಲಕ ಹಲ್ದ್ವಾನಿಯ ಸುಶೀಲಾ ತಿವಾರಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಪ್ರಖ್ಯಾತ ಬ್ರಿಟೀಷ್ ಪರ್ವತಾ ರೋಹಿ ಮಾರ್ಟಿನ್ ಮೊರನ್ ನೇತೃತ್ವದ 8 ಪರ್ವಾತರೋಹಿಗಳ ತಂಡ ಪಿತೋರ್ಗಡದ ನಂದಾ ದೇವಿ ಪರ್ವತದಲ್ಲಿ ನಾಪತ್ತೆಯಾಗಿದ್ದರು. ಮೇ 13 ರಂದು ಹೊರಟಿದ್ದ ತಂಡ ಮೇ 25 ರಂದು ಬೇಸ್ ಕ್ಯಾಂಪ್ಗೆ ವಾಪಾಸಾಗಬೇಕಿತ್ತು. ಜೂನ್ 13 ರಂದು ಅವರ ಪತ್ತೆಗಾಗಿ ಐಟಿಬಿಪಿ ತಂಡ ಕಾರ್ಯಾಚರಣೆ ಆರಂಭಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ