ಪಾಕ್ ಸೈನಿಕರ ಅಟ್ಟಹಾಸ; BSF ಯೋಧನ ಗಂಟಲು ಸೀಳಿ, ಕಣ್ಣು ಕಿತ್ತು ಹತ್ಯೆ
Team Udayavani, Sep 19, 2018, 4:06 PM IST
ಜಮ್ಮು/ನವದೆಹಲಿ: ಜಮ್ಮು ಸಮೀಪದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಪುಂಡಾಟಿಕೆಯನ್ನು ಮುಂದುವರಿಸಿದ್ದು, ಮಂಗಳವಾರ ಪಾಕಿಸ್ತಾನಿ ಸೇನೆ ಬಿಎಸ್ ಎಫ್ ಯೋಧನ ಗಂಟಲು ಸೀಳಿ, ಕಣ್ಣುಗಳನ್ನು ಕಿತ್ತು ಕ್ರೂರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಇದರಿಂದ ಉಭಯ ದೇಶಗಳ ನಡುವಿನ ವಾತಾವರಣ ಮತ್ತಷ್ಟು ಹದಗೆಟ್ಟಂತಾಗಿದೆ.
ಜಮ್ಮು ಸಮೀಪದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಬಿಎಸ್ ಎಫ್ ಯೋಧನ ಗಂಟಲನ್ನು ಸೀಳಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಕ್ರೂರ ಘಟನೆಯ ಬಳಿಕ ರಾಮ್ ಗಢ್ ಸೆಕ್ಟರ್ ನಲ್ಲಿ ಭದ್ರತಾ ಪಡೆಗಳು ಅಂತಾರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ಹೈ ಅಲರ್ಟ್ ಘೋಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Border Securty Force (BSF) has raised the issue of killing of its jawan with the Pakistan Rangers at the sector level. BSF has also sought Director General of Military Operations (DGMO) to raise the issue with Pakistan at its level.
— ANI (@ANI) September 19, 2018
ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ನರೇಂದ್ರ ಕುಮಾರ್ ಅವರನ್ನು ಶಸ್ತ್ರ ಸಹಿತ ಪಾಕ್ ಪಡೆಗಳು ಅಪಹರಿಸಿ ದೂರ ಕರೆದೊಯ್ದಿದ್ದರು. ಬಳಿಕ ಕ್ರೂರವಾಗಿ ಹಿಂಸಿಸಿ ಗಂಟಲು ಸೀಳಿ ಹತ್ಯೆಗೈದಿದ್ದರು. ಮಂಗಳವಾರ ಯೋಧನ ಶವ ದೊರೆತಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ. ಅಲ್ಲದೇ ಗಡಿ ಭದ್ರತಾ ಪಡೆ ಘಟನೆಯನ್ನು ಬಲವಾಗಿ ಖಂಡಿಸಿ ಪಾಕಿಸ್ತಾನಿ ರೇಂಜರ್ಸ್ ಗೆ ದೂರನ್ನು ಸಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ