ಬಿಎಸ್ಎನ್ಎಲ್: ಅರ್ಧದಷ್ಟು ಸಿಬಂದಿ ಹೊರೆ ಇಳಿಕೆ!
92 ಸಾವಿರ ಮಂದಿಯಿಂದ ವಿಆರ್ಎಸ್ಗೆ ಅರ್ಜಿ
Team Udayavani, Dec 4, 2019, 6:19 PM IST
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ವಿಲೀನ ಬಳಿಕ ಅವುಗಳನ್ನು ಉಳಿಸಲು ಸರಕಾರ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದಿದ್ದು ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
ಇದರಿಂದ ಬಿಎಸ್ಎನ್ಎಲ್ನಲ್ಲಿ ಅರ್ಧದಷ್ಟು ಸಿಬಂದಿ ಕಡಿಮೆಯಾಗಲಿದ್ದಾರೆ.
ಬಿಎಸ್ಎನ್ಎಲ್ನಲ್ಲಿ 78300, ಎಂಟಿಎನ್ಎಲ್ನಲ್ಲಿ 14378 ಮಂದಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಲಿದ್ದಾರೆ. ಇದರಿಂದಾಗಿ ಒಟ್ಟು 92700 ಸಿಬಂದಿ ಕೆಲಸ ತ್ಯಜಿಸಲಿದ್ದು ಸಕಾರಕ್ಕೆ ವಾರ್ಷಿಕ 8800 ಕೋಟಿ ರೂ. ಉಳಿತಾಯವಾಗಲಿದೆ.
ಸ್ವಯಂ ನಿವೃತ್ತಿ ಯೋಜನೆ ಹೊರತಾಗಿ ಸುಮಾರು 6 ಸಾವಿರ ಮಂದಿ ನಿವೃತ್ತಿಯಾಗಿದ್ದಾರೆ. 82 ಸಾವಿರ ಮಂದಿ ಸ್ವಯಂ ನಿವೃತ್ತಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಪಿ.ಕೆ. ಪುರ್ವಾರ್ ಅವರು ಹೇಳಿದ್ದಾರೆ.
ಇದೇ ವೇಳೆ ಎಂಟಿಎನ್ಎಲ್ನಲ್ಲಿ ಉದ್ದೇಶಿತ ಗುರಿಗಿಂತ ಹೆಚ್ಚು ಮಂದಿ ನೌಕರರು ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದಾರೆ. 13650 ಗುರಿ ಇದ್ದು, 14378 ಮಂದಿ ಅರ್ಜಿ ಹಾಕಿದ್ದಾರೆ ಎಂದು ಎಂಟಿಎನ್ಎಲ್ ಅಧ್ಯಕ್ಷ ಸುನಿಲ್ ಕುಮಾರ್ ಅವರು ಹೇಳಿದ್ದಾರೆ. ಇದರಿಂದ ವಾರ್ಷಿಕ 2272 ಕೋಟಿ ರೂ.
ಉಳಿತಾಯವಾಗಲಿದ್ದು, ಸಂಬಳ ವೆಚ್ಚ 500 ಕೋಟಿ ರೂ.ಗಳಿಗೆ ಇಳಿಕೆ ಕಾಣಲಿದೆ. ಹಾಗೆಯೇ ಬಿಎಸ್ಎನ್ನಲ್ಲಿ ಸದ್ಯ ನೌಕರರ ಸಂಬಳ ವೆಚ್ಚ 14 ಸಾವಿರ ಕೋಟಿ ರೂ. ಇದ್ದು, ಮುಂದಿನ ದಿನಗಳಲ್ಲಿ ಈ ವೆಚ್ಚ 7 ಸಾವಿರ ಕೋಟಿ ರೂ.ಗಳಿಗೆ ಇಳಿಕೆಯಾಗಲಿದೆ. ಎರಡೂ ಕಂಪೆನಿಗಳ ಒಟ್ಟು ಸಾಲ ಸುಮಾರು 40 ಸಾವಿರ ಕೋಟಿ ರೂ. ಇದೆ.
ಟೆಲಿಕಾಂ ಕಂಪೆನಿಗಳ ಸಾಲದ ಹೊರೆ, ಖರ್ಚು ವೆಚ್ಚ ತಗ್ಗಿಸಲು ಸಿಬಂದಿ ಕಡಿತದ ಮೊರೆ ಹೋಗಲಾಗಿದ್ದು, ಇದಕ್ಕಾಗಿ ಕಳೆದ ನ.4ರಂದು ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸಲಾಗಿತ್ತು. ಇದಕ್ಕೆ ಬಿಎಸ್ಎನ್ಎಲ್ನಲ್ಲಿ ಸುಮಾರು 1 ಲಕ್ಷ ಸಿಬಂದಿ ಅರ್ಹರಾಗಿದ್ದು, ಎಂಟಿಎಲ್ಎನ್ನಲ್ಲಿ 16300 ಮಂದಿ ಅರ್ಹರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ರಾಘವ್ ಛಡ್ಡಾ-ಪರಿಣಿತಿ ಛೋಪ್ರಾ ಶೀಘ್ರವೇ ಎಂಗೇಜ್
ಉದ್ಯೋಗ ಖಾತ್ರಿ ಕೂಲಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ
MUST WATCH
ಹೊಸ ಸೇರ್ಪಡೆ
ಇಡಬ್ಲೂಎಸ್ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರದಿಂದ ನಿರ್ಲಕ್ಷ್ಯ: ಹನುಮಂತ ಡಂಬಳ
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್
ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ
’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್
ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ