ಗೊಬ್ಬರಗಳಿಗೆ ಕೇಂದ್ರದ 28,655 ಕೋಟಿ ರೂ. ಸಬ್ಸಿಡಿ
Team Udayavani, Oct 14, 2021, 6:03 AM IST
ಹೊಸದಿಲ್ಲಿ: ಪೊಟಾಶಿಯಂ, ರಂಜಕಯುಕ್ತ ಗೊಬ್ಬರಗಳು ಸೇರಿದಂತೆ ಹಲವು ಪೌಷ್ಠಿಕಾಂಶ ಆಧಾರಿತ ಗೊಬ್ಬರಗಳಿಗೆ ಕೇಂದ್ರ ಸರಕಾರ, 28,655 ಕೋಟಿ ರೂ.ಗಳ ಸಬ್ಸಿಡಿ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ, ಪೊಟ್ಯಾ ಶಿಯಂ ಹಾಗೂ ರಂಜಕಯುಕ್ತ ಗೊಬ್ಬರಗಳ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್ಬಿಎಸ್) ನೀಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ. ಅಂದಹಾಗೆ, ಈ ಸಬ್ಸಿಡಿ, ಈ ವರ್ಷದ ಅಕ್ಟೋಬರ್ನಿಂದ ಮುಂದಿನ ವರ್ಷ ಮಾರ್ಚ್ವರೆಗಿನ ಅವಧಿಗೆ ಅನ್ವಯ ವಾಗಲಿದೆ.
ಹಿಂಗಾರು ಬಿತ್ತನೆಯ ತರಾತುರಿಯಲ್ಲಿರುವ ರೈತರಿಗೆ ಗೊಬ್ಬರಗಳು ಕೈಗೆಟಕುವ ಬೆಲೆಯಲ್ಲಿ ಸಿಗಲೆಂಬ ಸದುದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾಗಿ ಇದರಿಂದಾಗಿ, ನೈಟ್ರೋಜನ್ ಯುಕ್ತ ಗೊಬ್ಬರದ ದರ ಪ್ರತೀ ಕೆ.ಜಿ.ಗೆ 18.789 ರೂ., ರಂಜಕಯುಕ್ತ ಗೊಬ್ಬರಗಳು ಪ್ರತೀ ಕೆ.ಜಿ.ಗೆ 45.323 ರೂ. ಹಾಗೂ ಪೊಟ್ಯಾಶಿಯಂ ಯುಕ್ತ ಗೊಬ್ಬರಗಳು ಪ್ರತೀ ಕೆ.ಜಿ.ಗೆ 10.116 ಹಾಗೂ ಗಂಧಕ ಯುಕ್ತ ಗೊಬ್ಬರಗಳು ಪ್ರತೀ ಕೆ.ಜಿ.ಗೆ 2.374 ರೂ.ಗಳಿಗೆ ಸಿಗಲಿವೆ.
ಇದನ್ನೂ ಓದಿ:ಫೈನಲ್ ಪ್ರವೇಶಿಸಿದ ಕೋಲ್ಕತಾ ನೈಟ್ರೈಡರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…