ಗ್ರಾಹಕರ ಮೇಲಿನ ನಿರ್ಬಂಧ ಸದ್ಯದಲ್ಲೇ ತೆರವು
ಯೆಸ್ ಬ್ಯಾಂಕ್ ಗ್ರಾಹಕರಿಗೆ ಕೇಂದ್ರ ವಿತ್ತ ಸಚಿವರ ಭರವಸೆ
Team Udayavani, Mar 13, 2020, 8:50 PM IST
ನವದೆಹಲಿ: ಯೆಸ್ ಬ್ಯಾಂಕ್ ಗ್ರಾಹಕರ ಮೇಲೆ ವಿಧಿಸಲಾಗಿದ್ದ ಹಣ ಹಿಂಪಡೆಯುವ ಮೇಲಿನ ಮಿತಿ ಹಾಗೂ ಇನ್ನಿತರ ಆರ್ಥಿಕ ವ್ಯವಹಾರಗಳ ನಿರ್ಬಂಧವನ್ನು ಬಹುಶಃ ಇನ್ನು 3 ದಿನಗಳಲ್ಲಿ ಹಿಂಪಡೆಯುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಎಸ್ಬಿಐ ನೇತೃತ್ವದಲ್ಲಿ ಯೆಸ್ಬ್ಯಾಂಕ್ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ನಷ್ಟದಲ್ಲಿರುವ ಬ್ಯಾಂಕಿನ ಸಮಸ್ಯೆ ಬೇಗನೇ ದೂರವಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಪುನಶ್ಚೇತನಗೊಳ್ಳಲಿರುವ ಯೆಸ್ ಬ್ಯಾಂಕ್ಗೆ ಹೊಸ ಆಡಳಿತ ಮಂಡಳಿ ನೇಮಿಸುವುದಾಗಿ ಹೇಳಿದ್ದಾರೆ.
ಈ ನಡುವೆ, ಯೆಸ್ ಬ್ಯಾಂಕ್ನ ಷೇರುಗಳನ್ನು ಖರೀದಿಸಲು ಮುಂದಾಗಿರುವ ಐಸಿಐಸಿಐ, ಈ ಖರೀದಿಗಾಗಿ 1,000 ಕೋಟಿ ರೂ. ವ್ಯಯಿಸುವುದಾಗಿ ಹೇಳಿದೆ. ಎಚ್ಡಿಎಫ್ಸಿ ಬ್ಯಾಂಕ್ 1,000 ಕೋಟಿ ರೂ., ಆ್ಯಕ್ಸಿಸ್ ಬ್ಯಾಂಕ್ 600 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂರೂ ಬ್ಯಾಂಕುಗಳು ಒಟ್ಟಾರೆಯಾಗಿ 60 ಕೋಟಿ ಷೇರುಗಳನ್ನು ಖರೀದಿಸಲಿವೆ.
ಸಿಬಿಐನಿಂದ ಹೊಸ ಪ್ರಕರಣ
ಯೆಸ್ ಬ್ಯಾಂಕ್ನ ಸಂಸ್ಥಾಪಕ ರಾಣಾ ಕಪೂರ್, ಅವರ ಪತ್ನಿ ಬಿಂದು ಹಾಗೂ ಆವಂತಾ ರಿಯಾಲ್ಟಿ ಸಂಸ್ಥೆಯ ಪ್ರವರ್ತಕರಾದ ಗೌತಮ್ ಥಾಪರ್ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣವೊಂದನ್ನು ದಾಖಲಿಸಿಕೊಂಡಿದೆ. ಅಮೃತಾ ಶೆರ್ಗಿಲ್ ಬಂಗಲೆಯ ಮಾರಾಟ ಪ್ರಕ್ರಿಯೆಯಲ್ಲಿ ಸುಮಾರು 2,000 ಕೋಟಿ ರೂ.ಗಳ ಸಾಲವನ್ನು ಥಾಪರ್ರವರ ಕಂಪನಿಗೆ ನೀಡಲು ಲಂಚ ಪಡೆದ ಆರೋಪವುಳ್ಳ ಪ್ರಕರಣ ಇದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ