ಪ್ರಮೋದ್ ಸಾವಂತ್ ನೂತನ ಸಂಪುಟದಲ್ಲಿ ಎಂಜಿಪಿ ಮಿತ್ರ ಪಕ್ಷದ ಶಾಸಕರಿಗೂ ಸಿಗಲಿದೆಯೇ ಸ್ಥಾನ ?
Team Udayavani, Mar 17, 2022, 5:21 PM IST
ಪಣಜಿ : ಗೋವಾ ಬಿಜೆಪಿ ಸರ್ಕಾರದ ಪ್ರಮೋದ್ ಸಾವಂತ್ ಅವರ ನೂತನ ಸಂಪುಟಕ್ಕೆ ಎಂಜಿಪಿ ಮಿತ್ರ ಪಕ್ಷದ ಒಬ್ಬ ಶಾಸಕರಿಗೂ ಸ್ಥಾನ ಲಭಿಸಲಿದೆ ಎಂದೇ ಹೇಳಲಾಗುತ್ತಿದೆ. ಸಂಪುಟ ಪಟ್ಟಿ ಅಂತಮಗೊಳಿಸುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಪ್ರಮೋದ್ ಸಾವಂತ್ ರವರ ಸಂಪುಟದಲ್ಲಿ ಮಾವಿನ್ ಗುದಿನ್ಹೊ. ವಿಶ್ವಜಿತ್ ರಾಣೆ, ಗೋವಿಂದ ಗಾವಡೆ, ನಿಲೇಶ್ ಕಾಬ್ರಾಲ್ ರವರಿಗೆ ಸ್ಥಾನ ಲಭಿಸಲಿದೆ.
ಪ್ರಸಕ್ತ ಬಾರಿ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ರೋಹನ್ ಖಂವಟೆ, ರವಿ ನಾಯ್ಕ, ಬಾಬುಶ್ ಮೊನ್ಸೆರಾತ್, ರಮೇಶ್ ತವಡಕರ್, ಸುದೀನ ಧವಳೀಕರ್, ಮತ್ತು ಅಲೆಕ್ಸ ರೆಜಿನಾಲ್ಡ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ. ಇಷ್ಟೆ ಅಲ್ಲದೆಯೇ ಬಿಜೆಪಿ ಶಾಸಕರಾದ ನೀಲಕಂಠ ಹಳರ್ಣಕರ್, ಸುಭಾಷ್ ಶಿರೋಡಕರ್, ಸುಭಾಷ್ ಫಳದೇಸಾಯಿ ಇವರಲ್ಲಿ ಒಬ್ಬರನ್ನು ಸಂಪುಟಕ್ಕೆ ಸೇರಿಸಿಕೊಂಡು ಇನ್ನುಳಿದವರಿಗೆ ಸಭಾಪತಿ ಮತ್ತು ಉಪಸಭಾಪತಿ ಸ್ಥಾನ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಆಯ್ಕೆಯಾದ 20 ಶಾಸಕರ ಪೈಕಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ, ಇವರ ಪತಿ ಕೂಡ ಶಾಸಕರಾಗಿ ಚುನಾಯಿತರಾಗಿದ್ದು, ಇದರಿಂದಾಗಿ ಈ ಇಬ್ಬರು ಶಾಸಕಿಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೊ ಬೇಡವೊ ಎಂಬ ಗೊಂದಲ ಬಿಜೆಪಿಗೆ ಎದುರಾಗಿದೆ. ಶಾಸಕ ವಿಶ್ವಜಿತ್ ರಾಣೆ ಮತ್ತು ಬಾಬೂಶ್ ಮೊನ್ಸೆರಾತ್ ಸಚಿವ ಸಂಪುಟ ಸೇರುವ ಇಚ್ಛೆ ಹೊಂದಿರುವುದರಿಂದ ಇವರ ಪತ್ನಿಯರಾದ ಜೆನಿಫರ್ ಮೊನ್ಸೆರಾತ್ ಮತ್ತು ದುವ್ಯಾ ರಾಣೆ ಇವರಿಗೆ ಸಂಪುಟದಲ್ಲಿ ಸ್ಥಾನ ಲಭಿಸುವುದು ಕಷ್ಟವಾಗಿ ಪರಿಣಮಿಸಿದೆ.
ಇದನ್ನೂ ಓದಿ : ಹಿಜಾಬ್ ವಿವಾದ ; ಸಾಗರದಲ್ಲಿ ಮಾಂಸ ಮಾರಾಟ ವಹಿವಾಟು ಬಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್