ಮೋದಿಯಿಂದ ಪ್ರಚಾರ ಪಥ
Team Udayavani, Aug 14, 2017, 6:35 AM IST
ಮುಂಬಯಿ: ಈಗಾಗಲೇ ಮೂರು ವರ್ಷಗಳ ಅವಧಿ ಪೂರೈಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್ಡಿಎ ಸರಕಾರ ಉಳಿದ ಎರಡು ವರ್ಷಗಳಲ್ಲಿ ಯಾವುದೇ ಸುಧಾರಣೆ ಕ್ರಮಗಳನ್ನು ಪರಿಚಯಿಸುವುದಿಲ್ಲ. ಬದಲಿಗೆ ಈಗಾಗಲೇ ತಾನು ಜಾರಿ ಗೊಳಿಸಿರುವ ಯೋಜನೆಗಳು, ಸಾಧನೆಗಳನ್ನು ಪ್ರಚಾರ ಮಾಡಿ, ಆ ಮೂಲಕ ಹೆಚ್ಚು “ಜನಸ್ನೇಹಿ’ ಯಾಗುವತ್ತ ಗಮನಹರಿಸಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
“ಪ್ರಸ್ತುತ 2019ರ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡಿರುವ ಸರ್ಕಾರ ಇನ್ನು ಹೊಸ ಪ್ರಯತ್ನಗಳಿಗೆ ಕೈಹಾಕಲಾರದು. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ತಾವು ಆರಂಭಿಸಿರುವ ಮೂಲ ಸೌಲಭ್ಯ ಯೋಜನೆಗಳು ಹಾಗೂ ಕೈಗೊಂಡಿರುವ ನೋಟು ಅಮಾನ್ಯ ರೀತಿಯ ಸುಧಾರಣಾ ಕ್ರಮಗಳ ಯಶಸ್ಸಿನ ಕುರಿತು ಹೆಚ್ಚು ಮಾತನಾಡುವ ಮೂಲಕ ಜನರ ಮನಗೆಲ್ಲುವ ನಿರೀಕ್ಷೆಯಿದೆ. ಹಾಗೇ ಮುಖ್ಯವಾಗಿ ಆಡಳಿತ ಉತ್ತಮಗೊಳಿಸುವತ್ತ ಗಮನಹರಿಸಲಿರುವ ಸರಕಾರ, ಮುಂದಿನ ಎರಡು ವರ್ಷಗಳಲ್ಲಿ ಯಾವುದೇ ಹೊಸ ಯೋಜನೆ ಘೋಷಿಸುವ, ಕಾನೂನು ರೂಪಿಸುವ ಪ್ರಯತ್ನಕ್ಕೆ ಕೈಹಾಕಲಾರದು’ ಎಂದು ಬಾರ್ಕ್ಲೇಸ್ ಇಂಡಿಯಾದ ಪ್ರಮುಖ ಆರ್ಥಿಕ ತಜ್ಞ ಸಿದ್ಧಾರ್ಥ ಸನ್ಯಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
“ಇದೇ ವೇಳೆ 2019ರ ಚುನಾವಣೆ ಸಮೀ ಪಿ ಸಿದಂತೆ ಬಿಜೆಪಿಯ ‘ರಾಷ್ಟ್ರೀಯವಾದ’ವನ್ನು ಹೆಚ್ಚು ಪ್ರಚುರಪಡಿಸಲು ಗಮನಹರಿಸಲಿರುವ ಪ್ರಧಾನಿ ಮೋದಿ, ಸರಕಾರದ ಈವರೆಗಿನ “ಸುಧಾರಣಾವಾದ’ದ ದೃಷ್ಟಿಕೋನವನ್ನು ಸ್ವಲ್ಪ ದಿನಗಳ ಮಟ್ಟಿಗೆ ಬದಿಗಿರಿಸಲಿದ್ದಾರೆ’ ಎಂದು ಸಿದ್ಧಾರ್ಥ ಸನ್ಯಾಲ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ