ನಾವೂ ನಿಮ್ಮ ಹಾಗೆ ಸಾಮಾನ್ಯ ನಾಗರಿಕರು : ಅಶ್ವಿನಿ ವೈಷ್ಣವ್
ಭುವನೇಶ್ವರ್ ನಿಂದ ರಾಯಗಢದ ರೈಲಿನಲ್ಲಿ ಪ್ರಯಾಣಿಕರ ಜೊತೆಯಲ್ಲಿ ಸಂಚಾರ ಮಾಡಿದ ಅಶ್ವಿನಿ ವೈಷ್ಣವ್
Team Udayavani, Aug 20, 2021, 12:11 PM IST
ಒಡಿಶಾ : ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ನಿನ್ನೆ(ಗುರುವಾರ, ಆಗಸ್ಟ್ 19) ರಾತ್ರಿ ರೈಲಿನಲ್ಲಿ ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ನಡೆದಾಡುತ್ತಾ ಭಾರತೀಯ ರೈಲು ಸೇವೆ ಹಾಗೂ ಕಾರ್ಯನಿರ್ವಹಿಸುವ ವಿಧಾನದ ಬಗ್ಗೆ ಪ್ರಯಾಣಿಕರಿಂದ ಅಭಿಪ್ರಾಯ ಸ್ವೀಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಾಜಿ ಐಎಎಸ್ ಅಧಿಕಾರಿ ಆಗಿರುವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಸಂಪುಟವನ್ನು ಸೇರ್ಪಡೆಗೊಂಡಿದ್ದರು.
ಇದನ್ನು ಓದಿ : ದಣಿವರಿಯದ “ಅಂತರ್ಯಾಮಿ” ಪಯಣ: ನಿವೃತ್ತ ಶಿಕ್ಷಕ…ಮಹಾನ್ ಪರಿಸರ ಪ್ರೇಮಿ
ನಾಲ್ಕು ದಿನಗಳ ಒಡಿಶಾದಲ್ಲಿ ಬಿಜೆಪಿಯ ಜನ ಆಶೀರ್ವಾದ ಯಾತ್ರೆಯಲ್ಲಿರುವ ವೈಷ್ಣವ್, ಭುವನೇಶ್ವರ್ ನಿಂದ ರಾಯಗಢದ ರೈಲಿನಲ್ಲಿ ನಿನ್ನೆ(ಗುರುವಾರ, ಆಗಸ್ಟ್ 19) ಪ್ರಯಾಣಿಕರ ಜೊತೆಯಲ್ಲಿ ಸಂಚಾರ ಮಾಡಿದ್ದಾರೆ.
ಸಚಿವ ವೈಷ್ಣವ್, ರೈಲ್ವೆಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದ್ದಲ್ಲದೇ, ರೈಲಿನಲ್ಲಿ ಪ್ರಯಾಣಿಸುತ್ತಿರುವವರನ್ನು ಭಾರತೀಯ ರೈಲ್ವೇ ಸೇವೆ ಬಗ್ಗೆ ಪ್ರಯಾಣಿಕರ ಅಭಿಪ್ರಾಯಗಳನ್ನು ಕೇಳಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜನರೊಂದಿಗೆ ಮಾತನಾಡಿರುವುದನ್ನು ಹಾಗೂ ಅಧಿಕಾರಿಗಳೊಂದಿಗೆ ರೈಲ್ವೆ ಇಲಾಖೆಯ ಬಗ್ಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿರುವುದನ್ನು ವೈಷ್ಣವ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ (सबका साथ, सबका विकास, सबका विश्वास, सबका प्रयास/ ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿಗೆ, ಎಲ್ಲರ ಪ್ರಯತ್ನ ) ಎಂದು ಅವರು ಬರೆದುಕೊಂಡಿದ್ದಾರೆ.
सबका साथ, सबका विकास, सबका विश्वास, सबका प्रयास |
ରେଳ ଯାତ୍ରୀ ମାନଙ୍କ ସହିତ ବାର୍ତ୍ତାଳାପ ସମୟରେ ବିଭିନ୍ନ ବର୍ଗର ଯାତ୍ରୀ ମାନଙ୍କ ସହିତ କଥା ହେଇ ବିଭିନ୍ନ ବିଷୟବସ୍ତୁ ସମ୍ବନ୍ଧରେ ଅବଗତ ହେଲି I. ?#JanAshirwadYatra pic.twitter.com/o1BLRUpokc
— Ashwini Vaishnaw (@AshwiniVaishnaw) August 19, 2021
ರೈಲು ಸ್ವಚ್ಛವಾಗಿದೆಯೇ ಎಂದು ಒಬ್ಬ ಪ್ರಯಾಣಿಕರಲ್ಲಿ ಸಚಿವ ವೈಷ್ಣವ್ ಕೇಳಿದ್ದಾರೆ. ಮಾತ್ರವಲ್ಲದೇ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆ, ನಿಮ್ಮನ್ನು ಭೇಟಿ ಆಗಿರುವುದು ದೊಡ್ಡ ಅವಕಾಶ. ನಾವು ನಿಮ್ಮನ್ನು ಹೀಗೆ ಭೇಟಿ ಮಾಡುತ್ತೇವೆಂದುಕೊಂಡೇ ಇರಲಿಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ವೈಷ್ಣವ್, ನಾವು ಕೂಡ ನಿಮ್ಮ ಹಾಗೆ ಸಾಮಾನ್ಯ ನಾಗರಿಕರೇ ಎಂದು ಹೇಳಿದ್ದಾರೆ.
ଭୁବନେଶ୍ୱର ଷ୍ଟେସନ ବୁଲିବା ସମୟରେ ଯାତ୍ରୀ ମାନଙ୍କ ସହିତ କଥା ହେଲି। ଯାତ୍ରୀ ମାନଙ୍କ ସହ କଥା ହେବା ବେଳେ ସେମାନଙ୍କର ବିଭିନ୍ନ ସମସ୍ୟା ଓ ସୁବିଧା ସମ୍ପର୍କରେ ପଚାରି ବୁଝିଲି I. ?#JanAshirwadJatra pic.twitter.com/PK7LFX7dv8
— Ashwini Vaishnaw (@AshwiniVaishnaw) August 19, 2021
କୋରାପୁଟ ଅଞ୍ଚଳରେ ରେଳବାଇ ପ୍ରକଳ୍ପ ଗୁଡ଼ିକର ନିର୍ମାଣ କାର୍ଯ୍ୟ ଅଗ୍ରଗତି ସମ୍ବନ୍ଧରେ ଟ୍ରେନ ରେ ପୂର୍ବତଟ ରେଳପଥ ର ମହାପ୍ରବନ୍ଧକ, ମଣ୍ଡଳ ରେଳବାଇ ପ୍ରବନ୍ଧକ, ଅନ୍ୟାନ ଅଧିକାରୀ ଓ ସ୍ଥାନୀୟ ଅଞ୍ଚଳର ଅନୁଭବୀ ଅଭିଜ୍ଞ ବ୍ୟକ୍ତି ମାନଙ୍କ ସହିତ ଆଲୋଚନା କଲି pic.twitter.com/kfw3IcDewe
— Ashwini Vaishnaw (@AshwiniVaishnaw) August 19, 2021
ಇದನ್ನು ಓದಿ : ಮುಂದಿನ ಲೋಕಸಭೆ ಚುನಾವಣೆಗೆ ಮೋದಿ ವಿರುದ್ಧ ಸೋನಿಯಾ ನೇತೃತ್ವದ ಮೈತ್ರಿ ಸೈನ್ಯ..?!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ