ಬಜೆಟ್ ವೇಳೆ ಸರಕಾರಕ್ಕೆ ಹಣಕಾಸಿನ ಕೊರತೆ?
Team Udayavani, Jan 15, 2021, 7:15 AM IST
ಹೊಸದಿಲ್ಲಿ: ಈ ಬಾರಿಯದ್ದು “ಹಿಂದೆಂದೂ ಕಂಡರಿ ಯದಂತಹ ಬಜೆಟ್’ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈಗ ಕೋವಿಡ್ ಪೀಡಿತ ಆರ್ಥಿಕತೆಗೆ ಹೆಚ್ಚುವರಿ ಆದಾಯ ತಂದುಕೊಡುವಂಥ ವಿಶ್ವಾಸಾರ್ಹ ಮೂಲವನ್ನು ಕಂಡುಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಸರಕಾರದ ಸಾಲವು ಈಗಾಗಲೇ ಮಿತಿಯನ್ನು ಮೀರಿದೆ, ಆದಾಯವು ಕುಂಠಿತವಾಗಿದೆ, ವಿತ್ತೀಯ ಕೊರತೆಯು ಅಗಾಧವಾಗಿ ಬೆಳೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಸಂಪನ್ಮೂಲಗಳನ್ನು ಪತ್ತೆಮಾಡುವುದೇ ಕಷ್ಟದ ಕೆಲಸ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗ ಸ್ವಲ್ಪಮಟ್ಟಿಗೆ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿರುವ ಕಾರಣ ತೆರಿಗೆ ಆದಾಯ ಹೆಚ್ಚಾಗಿ ಸರಕಾರಕ್ಕೆ ಸ್ವಲ್ಪಮಟ್ಟಿಗೆ ರಿಲೀಫ್ ನೀಡಬಹುದು. ಆದರೂ, ಪ್ರಸಕ್ತ ವರ್ಷದಲ್ಲಿ ಸರಕಾರವು ತನ್ನ ಅಧೀನದಲ್ಲಿರುವ ಸಂಸ್ಥೆಗಳ ಮಾರಾಟ ಅಥವಾ ಬಂಡವಾಳ ಹಿಂತೆಗೆತದಿಂದ 2.1 ಲಕ್ಷಕೋಟಿ ರೂ. ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಆದರೆ ಸಂಗ್ರಹವಾದದ್ದು ಕೇವಲ 13,800 ಕೋಟಿ ರೂ. ಮಾತ್ರ. ಪ್ರಸಕ್ತ ವರ್ಷ ಸರಕಾರಕ್ಕೆ 7 ಲಕ್ಷಕೋಟಿ ರೂ.ಗಳ ಆದಾಯ ಕೊರತೆಯೂ ಎದುರಾಗಲಿದೆ. ಈ ಎಲ್ಲ ಸ್ಥಿತಿಗತಿಗಳನ್ನು ನೋಡಿದರೆ, ಹಣಕಾಸಿನ ಕೊರತೆ ಎದುರಾಗುವುದು ಬಹುತೇಕ ಖಚಿತ ಎನ್ನುತ್ತಾರೆ ತಜ್ಞರು. ಅಲ್ಲದೆ, ಈಗ “ಜನರು ಹೆಚ್ಚು ಹೆಚ್ಚು ಖರ್ಚು ಮಾಡುವಂತೆ ಮಾಡುವುದು’ ಬಿಟ್ಟರೆ ಪರ್ಯಾಯ ಮಾರ್ಗವೇ ಉಳಿದಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು