ಬೇಳೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಕ್ರಮ
Team Udayavani, Jul 27, 2021, 6:10 AM IST
ಹೊಸದಿಲ್ಲಿ: ಮಹತ್ವದ ಬೆಳವಣಿಗೆ ಯೊಂದರಲ್ಲಿ ತೊಗರಿಬೇಳೆ ಜಾತಿಗೆ ಸೇರಿದ ಮಸೂರ್ ದಾಲ್ ಮೇಲಿನ ಆಮದು ಸುಂಕವನ್ನು ಕೇಂದ್ರ ಸರಕಾರ ಶೂನ್ಯಕ್ಕಿಳಿಸಿದೆ.
ಜತೆಗೆ ಈ ಜಾತಿಯ ಬೇಳೆಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.30ರಿಂದ 20ಕ್ಕೆ ಇಳಿಕೆ ಮಾಡಲಾಗಿದ್ದು, ಇವುಗಳ ಸಾಗಣೆ ಮೇಲೆ ವಿಧಿಸಲಾಗುತ್ತಿದ್ದ ಕೃಷಿ ಮೂಲಸೌಕರ್ಯ ಅಭಿವೃದ್ಧಿ ತೆರಿಗೆಯನ್ನೂ ಅರ್ಧದಷ್ಟು (ಶೇ. 10) ಇಳಿಸಲಾಗಿದೆ. ಬೇಳೆಗಳ ಬೆಲೆ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳ ಲಾಗಿದೆ.
ಈ ಕುರಿತಂತೆ, ಕೇಂದ್ರ ಸರಕಾರ ಹೊರಡಿಸಿರುವ ಅಧಿ ಸೂಚನೆ ಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ರಾಜ್ಯ ಸಭೆಯ ಗಮನಕ್ಕೆ ತಂದರು. ಕೃಷಿ ಮೂಲಸೌಕರ್ಯಾಭಿವೃದ್ಧಿ ತೆರಿಗೆ ಮೇಲಿನ ಇಳಿಕೆ ದೇಶದಲ್ಲಿ ಬೆಳೆಯುವ ಅಥವಾ ವಿದೇಶದಿಂದ ಆಮದಾಗುವ ಮಸೂರ್ ದಾಲ್ಗೂ ಅನ್ವಯವಾಗುತ್ತದೆ.
ಆದರೆ, ಅಮೆರಿಕದಿಂದ ಬರುವ ಮಸೂರ್ ದಾಲ್ಗೆ ಈ ಇಳಿಕೆ ಅನ್ವಯಿಸು ವುದಿಲ್ಲ. ಇನ್ನು, ಕಸ್ಟಮ್ಸ್ ಸುಂಕ ಇಳಿಕೆ ಅಮೆರಿಕ ಸೇರಿದಂತೆ ಎಲ್ಲ ದೇಶಗಳಿಂದ ಬರುವ ಹಾಗೂ ದೇಶದಲ್ಲಿ ಸಾಗಣಿಕೆ ಯಾಗುವ ಮಸೂರ್ ದಾಲ್ ಮೇಲೆ ಅನ್ವಯವಾಗುತ್ತದೆ ಎಂದರು.