ಇನ್ನೂ 25 ಚೀತಾಗಳಿಗೆ ಆಶ್ರಯ ನೀಡುವ ಸಾಮರ್ಥ್ಯವಿದೆ

ಮಧ್ಯಪ್ರದೇಶ ಸರಕಾರದ ಅರಣ್ಯಾಧಿಕಾರಿ ಮಾಹಿತಿ

Team Udayavani, Sep 19, 2022, 6:55 AM IST

ಇನ್ನೂ 25 ಚೀತಾಗಳಿಗೆ ಆಶ್ರಯ ನೀಡುವ ಸಾಮರ್ಥ್ಯವಿದೆ

ಭೋಪಾಲ್‌: ಆಫ್ರಿಕಾದ ಚೀತಾಗಳಿಗೆ ಹೊಸ ಆವಾಸಸ್ಥಾನವಾಗಿರುವ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವು ಅಂಥ 20ರಿಂದ 25ರಷ್ಟು ಚೀತಾಗಳಿಗೆ ಆಶ್ರಯ ನೀಡುವಷ್ಟು ವಿಶಾಲವಾ­ಗಿದ್ದು, ಅಲ್ಲಿ ಅವುಗಳಿಗೆ ಅಗತ್ಯ ವಾದಷ್ಟು ಶಿಕಾರಿಗಳೂ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೀತಾ ಮರುಪರಿಚಯ ಯೋಜನೆ ಖಂಡಿತಾ ಯಶಸ್ವಿಯಾಗ­ಲಿದೆ. ಕುನೋ ಉದ್ಯಾನವು 750 ಚದರ ಕಿ. ಮೀ. ವ್ಯಾಪ್ತಿಯಲ್ಲಿ ಹಬ್ಬಿದ್ದು, ಅದರ ಸುತ್ತಲೂ 6 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ದಟ್ಟ ಕಾಡಿದೆ. ಮಧ್ಯಪ್ರದೇಶದ ಶಿವಪುರಿ ಮತ್ತು ಶಿಯೋಪುರ ಜಿಲ್ಲೆಗಳಿಂದ ರಾಜಸ್ಥಾನದ ಬಾರನ್‌ ಜಿಲ್ಲೆಯವರೆಗೂ ಇದು ವ್ಯಾಪಿಸಿದೆ. ಅಲ್ಲದೇ, ಈ ಚೀತಾಗಳು ಮಾನವ-ಪ್ರಾಣಿ ಸಂಘರ್ಷದ ಬಲೆಗೆ ಬೀಳುವ ಸಾಧ್ಯತೆ ಕಡಿಮೆ ಎಂದು ಮಧ್ಯಪ್ರದೇಶದ ಪ್ರಧಾನ ಅರಣ್ಯ ಸಂರಕ್ಷಕ ಜೆ.ಎಸ್‌.ಚೌಹಾಣ್‌ ಹೇಳಿದ್ದಾರೆ.

ಮೋದಿ ವಿರುದ್ಧ ಜೈರಾಂ ಕಿಡಿ: “ಭಾರತದಲ್ಲಿ ಚೀತಾಗಳನ್ನು ಮರುಪರಿಚಯಿಸಲು ಹಿಂದಿನ ಸರಕಾರಗಳು ರಚನಾತ್ಮಕ ಪ್ರಯತ್ನವನ್ನು ಮಾಡಲೇ ಇಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ವಿರುದ್ಧ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಂ ರಮೇಶ್‌ ಹರಿಹಾಯ್ದಿದ್ದಾರೆ. ಪತ್ರವೊಂ­ದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಜೈರಾಂ, “2009ರಲ್ಲಿ ಪ್ರಾಜೆಕ್ಟ್ ಚೀತಾವನ್ನು ಅನಾವರಣಗೊಳಿಸಿದ ಪತ್ರವಿದು. ಮೋದಿ­ಯವರು ಒಬ್ಬ ವಿವೇಕವೇ ಇಲ್ಲದ ಸುಳ್ಳುಗಾರ’ ಎಂದಿದ್ದಾರೆ.

ಜತೆಗೆ 2009ರಲ್ಲಿ ವನ್ಯಜೀವಿ ಟ್ರಸ್ಟ್‌ನ ಎಂ.ಕೆ.ರಂಜಿತ್‌ಸಿನ್ಹಾರಿಗೆ “ಚೀತಾಗಳನ್ನು ಮರುಪರಿ­ಚಯಿಸುವ ಯೋಜನೆಗೆ ಮಾರ್ಗಸೂಚಿ ಸಿದ್ಧಪಡಿಸಿ’ ಎಂದು ಸೂಚಿಸಿ ಬರೆದ ಪತ್ರವನ್ನೂ ಜೈರಾಂ ಅಪ್‌ಲೋಡ್‌ ಮಾಡಿದ್ದಾರೆ.

ಎಡಿಟ್‌ ಮಾಡಿದ ಫೋಟೋ ಟ್ವೀಟ್‌
ಕುನೋ ರಾಷ್ಟ್ರೀಯ ಉದ್ಯಾನ ವನಕ್ಕೆ 8 ಚೀತಾಗಳನ್ನು ಬಿಡುಗಡೆ ಮಾಡಿದ ಬಳಿಕ ಪ್ರಧಾನಿ ಮೋದಿ ಫೋಟೊ ತೆಗೆಯುವ ವೇಳೆ ಕೆಮರಾದ ಕ್ಯಾಪ್‌ ತೆಗೆದಿರಲಿಲ್ಲ ಎಂದು ವಿಪಕ್ಷಗಳ ಕೆಲವು ಮುಖಂಡರು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಆ ಫೋಟೋ ಎಡಿಟ್‌ಮಾಡಲಾಗಿದೆ. ಅದನ್ನೇ ವಿಪಕ್ಷಗಳ ಮುಖಂಡರು ಶೇರ್‌ ಮಾಡಿದ್ದಾರೆ ಎಂದು ಬಿಜೆಪಿಯ ಡಾ| ಸುಖಾಂತ ಮಜುಂದಾರ್‌ ಟ್ವೀಟ್‌ ಮಾಡಿದ್ದಾರೆ. ನಿಕಾನ್‌ ಕಂಪೆನಿಯ ಕೆಮರಾಕ್ಕೆ ಕ್ಯಾನೊನ್‌ ಕಂಪೆನಿಯ ಕ್ಯಾಪ್‌ ಹಾಕಲಾಗಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಎಡಿಟ್‌ ಮಾಡಲಾಗಿರುವ ಫೋಟೋ ಹಂಚಿಕೊಂಡಿರುವ ಬಗ್ಗೆ ಟಿಎಂಸಿ ಸಂಸದ ಜವ್ಹಾರ್‌ ಸಿರ್ಕಾರ್‌ ಸೇರಿ ವಿಪಕ್ಷಗಳ ಹಲವು ಸಂಸದರು ಪ್ರಧಾನಿ­ ಯವರನ್ನು ಟೀಕಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, “ಫೋಟೋ ಎಡಿಟ್‌ ಮಾಡಿದವರಿಗೆ ಕಂಪೆನಿಗಳ ಮಧ್ಯದ ವ್ಯತ್ಯಾಸವೂ ತಿಳಿದಿಲ್ಲ. ನಾಯಕರ ಬಗ್ಗೆ ಅಪಪ್ರಚಾರ ಮಾಡುವಲ್ಲಿ ನೀವು ಎಡವಿದ್ದೀರಿ’ ಎಂದು ವಿಪಕ್ಷಗಳ ನಾಯಕರ ಕಾಲೆಳೆದಿದ್ದಾರೆ.

ಟಾಪ್ ನ್ಯೂಸ್

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಮಕ್ಕಳ ಪರೀಕ್ಷೆ ಜತೆಗೆ ಆಟವಾಡುವುದು ಬೇಡ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪದನಾಮ ಬದಲಾವಣೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drift

ಬ್ಯುಸಿ ರೋಡ್‌ನಲ್ಲಿ ಬೆನ್ಝ್‌ ಕಾರ್‌ ಡ್ರಿಫ್ಟ್‌ : ಪ್ರಕರಣ ದಾಖಲು

cow herd

ಖಾಸಗಿ ಬಸ್‌ ಡಿಕ್ಕಿ : 14 ಹಸುಗಳು ಸಾವು

10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

10 ಕೋಟಿ ರೂ. ನೀಡದಿದ್ದರೆ… ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ

sambeeth patra

ರಾಹುಲ್‌ ಗಾಂಧಿ ಆಧುನಿಕ ಭಾರತದ ಮಿರ್‌ ಜಾಫರ್‌ – ಸಂಬಿತ್‌ ಪಾತ್ರ

80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

lok adalat

ಚೆಕ್‌ ಅಮಾನ್ಯ ಪ್ರಕರಣ: 5.69 ಲಕ್ಷ ರೂ. ದಂಡ

police karnataka

ಕುರ್ಕಾಲು:ಯುವತಿ ನಾಪತ್ತೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

ನೂತನ ನೇಕಾರ ನಿಗಮ ಸ್ಥಾಪನೆ: ಸಿಎಂಗೆ ಅಭಿನಂದನೆ

cON-AA

15ಕ್ಕೂ ಹೆಚ್ಚು ದಲಿತ ನಾಯಕರು ಕಾಂಗ್ರೆಸ್‌ ಸೇರ್ಪಡೆ

police siren

ಬೆಳಾಲು ಎರ್ಮಲದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಮದ್ಯ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.