ಬವಣೆ ನೀಗಲು ಇಂದ್ರಾವತಿ
Team Udayavani, Mar 23, 2018, 6:00 AM IST
ಹೊಸದಿಲ್ಲಿ: ಕರ್ನಾಟಕ ಮತ್ತು ತಮಿಳುನಾಡಿನ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಟ್ರದ ಇಂದ್ರಾವತಿ ನದಿಯ ಹೆಚ್ಚುವರಿ ನೀರು ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ವಿಶ್ವ ನೀರು ದಿನದ ಅಂಗವಾಗಿ ಫಿಕ್ಕಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಿನ ಲಭ್ಯತೆಗೆ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ನಡೆಸಲಾಗುವುದು ಎಂದೂ ತಿಳಿಸಿದ್ದಾರೆ.
ಯಾರಿಗೆ ಅನುಕೂಲ? ಈ ನದಿಗಳನ್ನು ಜೋಡಣೆ ಮಾಡುವುದರಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಕುಡಿಯುವ ನೀರು ಪೂರೈಕೆಗೆ ಅನುಕೂಲ.
ಜೋಡಣೆ ಹೇಗೆ? ಸದ್ಯದ ಯೋಜನೆ ಪ್ರಕಾರ ನೀರನ್ನು ಪೈಪ್ ಗಳ ಮೂಲಕ ಸಾಗಿಸಲಾಗುವುದು. ಈ ಮೂಲಕ ಕಾವೇರಿಗೆ 100 ಟಿಎಂಸಿ ನೀರು ತಲುಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವರ್ಷವೇ ಆರಂಭ : 30 ನದಿ ಜೋಡಣಾ ಯೋಜನೆಗಳಲ್ಲಿ ಐದು ಈ ವರ್ಷವೇ ಆರಂಭ.
ನೀರು ಪೂರೈಕೆ ಹೇಗೆ?
ಹಂತ 1: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿರುವ ಇಂದ್ರಾವತಿ ನದಿಯ ಹೆಚ್ಚುವರಿ ನೀರು ಗೋದಾವರಿಗೆ.
ಹಂತ 2: ಗೋದಾವರಿಯಿಂದ ಸೀದಾ ಕಾಳೇಶ್ವರಿ ಜಲಾಶಯಕ್ಕೆ.
ಹಂತ 3 : ಕಾಳೇಶ್ವರಿ ಜಲಾಶಯದಿಂದ ಮತ್ತೆರಡು ಜಲಾಶಯಕ್ಕೆ ನೀರು ಹರಿಸಿ ಅಲ್ಲಿಂದ ಕಾವೇರಿಗೆ.
ಹಂತ 4 (ಇನ್ನೊಂದು ಮೂಲ) ಪೋಲಾವರಂ ಜಲಾಶಯದ ನೀರನ್ನು ಕೃಷ್ಣಾ ನದಿಗೆ
ಹಂತ 5: ಕೃಷ್ಣಾ ನದಿಯಿಂದ ಕರ್ನಾಟಕ – ಆಂಧ್ರದ ಪೆನ್ನಾರ್ಗೆ.
ಹಂತ 6 : ಪೆನ್ನಾರ್ ನದಿಯಿಂದ ಕಾವೇರಿಗೆ ಹರಿಸುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು