ಚಳ್ಳಕೆರೆ To ಚಂದ್ರಲೋಕ; ಸಾಫ್ಟ್ ಲ್ಯಾಂಡಿಂಗ್ ತಾಲೀಮು
Team Udayavani, Sep 6, 2019, 6:00 AM IST
ಚಂದ್ರನ ಮೇಲೆ ಇಳಿದು ಹೆಜ್ಜೆ ಇಡುವ ಚಂದ್ರಯಾನ -2ರ ಲ್ಯಾಂಡರ್ ಹಾಗೂ ರೋವರ್ಗಳು ಈ ಮೊದಲೇ ಚಂದ್ರನಂಥ ಮೇಲ್ಮೆ„ನಲ್ಲಿ ಸವಾರಿ ಮಾಡಿ “ಅನುಭವ’ ಗಿಟ್ಟಿಸಿ ಕೊಂಡಿದ್ದವು!
ಇದಕ್ಕಾಗಿಯೇ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಪ್ರದೇಶದಲ್ಲಿ ಸಿದ್ಧಪಡಿಸಲಾಗಿದ್ದ ಕೃತಕ ಚಂದ್ರನ ನೆಲದಲ್ಲಿ ಪ್ರಯೋಗಕ್ಕೆ ಒಳಪಟ್ಟಿದ್ದವು. ಚಂದ್ರನ ಮೇಲಿನ ನೆಲ ಹಾಗೂ ಇಲ್ಲಿನ ಪ್ರದೇಶಕ್ಕೆ ಸಾಮ್ಯತೆಯಿದೆ. ಆದ್ದರಿಂದ ಇಸ್ರೋ ಇಲ್ಲಿನ ಪ್ರದೇಶದಲ್ಲಿ ಚಂದ್ರನ ಅಂಗಳವನ್ನು ಕೃತಕವಾಗಿ ಸೃಷ್ಟಿಸಿ ಪ್ರಯೋಗಗಳನ್ನು ಕೈಗೊಂಡಿತು. ಚಂದ್ರನ ಅಂಗಳಕ್ಕಿಳಿಯುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಪಕರಣಗಳು ಇಲ್ಲಿ ಕಠಿಣ ಪರೀಕ್ಷೆಗೆ ಒಳಪಟ್ಟಿವೆ.
ಗಮನಾರ್ಹ ವಿಷಯವೆಂದರೆ, ತಮಿಳುನಾಡಿನ ಸೇಲಂ ಜಿಲ್ಲೆಯ ಸೀತಂಪೂಂಡಿ ಹಾಗೂ ಕುನ್ನಾಮಲೈನಲ್ಲಿರುವ ಬಂಡೆಗಳ ಗುಣ-ರಚ ನೆ ಚಂದ್ರನ ಮೇಲಿರುವ ಬಂಡೆಗಳನ್ನು ಹೋಲುತ್ತವೆ. ಹಾಗಾಗಿ, ಅವು ಗಳನ್ನು ತಂದು ನಾನಾ ಪ್ರಮಾಣದಲ್ಲಿ ಪುಡಿ ಮಾಡಿ ಚಳ್ಳಕೆರೆ ತಾಲೂಕಿನ ಭೂಮಿಯ ಮೇಲ್ಮೈ ಮೇಲೆ ನಿರ್ಮಿಸಲಾಗಿರುವ ಕಂದಕಗಳ ಮೇಲೆ ಹರಡಲಾಯಿತು.
ದೊಡ್ಡಉಳ್ಳಾರ್ತಿ ನೆಲದಲ್ಲಿ 9 ನಾನಾ ಆಳತೆಯ ಚಂದ್ರನ ಮೇಲ್ಮೈ ಹೋಲುವ ಕಂದಕಗಳನ್ನು ನಿರ್ಮಿಸಲಾಯಿತು. 5 ಮೀಟರ್ನಿಂದ 15 ಮೀಟರ್ವರೆಗೆ ಕಂದಕಗಳ ಮೇಲೆ ಪ್ರಯೋಗಗಳನ್ನು ಕೈಗೊಳ್ಳಲಾಯಿತು. 2008ರಲ್ಲಿ ಚಂದ್ರಯಾನ-1 ಯೋಜ ನೆಯ ವೇಳೆ ಆರ್ಬಿಟರ್ ನೌಕೆಯಿಂದ ಪಡೆದಿದ್ದ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಈ ಕೃತಕ ವಾತಾವರಣವನ್ನು ನಿರ್ಮಿಸಲಾಯಿತು. ಇವುಗಳ ರಚನೆಗಾಗಿ ವಿಜ್ಞಾನಿಗಳು, ಆರ್ಕಿಟೆಕ್ಟ್ ಹಾಗೂ ಎಂಜಿನಿಯರ್ಗಳ ತಂಡ ವರ್ಷಗಟ್ಟಲೇ ಶ್ರಮಿಸಿದೆ.
ಚಳ್ಳಕೆರೆ ತಾಲೂಕು :ವಿಜ್ಞಾನ ತಂತ್ರಜ್ಞಾನದ ಹಬ್
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಮುಖ ಕೇಂದ್ರ ವಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಇಸ್ರೋ), ಬಾಬಾ ಅಣುಶಕ್ತಿ ಕೇಂದ್ರ (ಬಿಎಆರಿÕ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಪ್ರದೇಶದಲ್ಲಿ ಸ್ಥಾಪಿತವಾಗಿವೆ. ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿವೆ. ಚಳ್ಳಕೆರೆ ತಾಲೂಕಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಎರಡು ಕೇಂದ್ರಗಳನ್ನು ಹೊಂದಿದೆ. ಒಂದು ಕೇಂದ್ರ ಚಳ್ಳಕೆರೆಯಿಂದ 7 ಕಿಮೀ ಹಾಗೂ ಬೆಂಗಳೂರಿನಿಂದ 214 ಕಿಮೀ ದೂರದಲ್ಲಿದೆ. ಮತ್ತೂಂದು ಕೇಂದ್ರ ಚಳ್ಳಕೆರೆಯಿಂದ 18 ಕಿಮೀ, ಬೆಂಗಳೂರಿನಿಂದ 218 ಕಿಮೀ ಹಾಗೂ ನಾಯಕನಹಟ್ಟಿಯಿಂದ 3 ಕಿಮೀ ದೂರದಲ್ಲಿದೆ. ದೊಡ್ಡಉಳ್ಳಾರ್ತಿ ಪ್ರದೇಶದಲ್ಲಿ 473 ಎಕರೆ ಹಾಗೂ ನಾಯಕನಹಟ್ಟಿ ಸಮೀಪದ ಕುದಾಪುರ ಕಾವಲು ಪ್ರದೇಶದಲ್ಲಿ 100 ಎಕರೆ ಪ್ರದೇಶವನ್ನು ಇಸ್ರೋಗೆ ನೀಡಲಾಗಿದೆ. ಈ ಎರಡು ಪ್ರದೇಶಗಳಲ್ಲಿ ಇಸ್ರೋ ಕಾಂಪೌಂಡ್ಗಳನ್ನು ನಿರ್ಮಿಸಿ ಪ್ರಯೋಗಗಳನ್ನು ಆರಂಭಿಸಿದೆ.
ಕೆಎಂ ಶಿವಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
MUST WATCH
ಹೊಸ ಸೇರ್ಪಡೆ
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ