ಮೋದಿ ಗೆದ್ದ ಬಗೆಯನ್ನು ಪರಿಶೀಲಿಸಿ: ಶಶಿ ತರೂರ್
Team Udayavani, Aug 28, 2019, 5:41 AM IST
ಹೊಸದಿಲ್ಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆಯು ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ ಮತಹಂಚಿಕೆಗೆ ಹೋಲಿಸಿದರೆ ಶೇ. 31ರಿಂದ ಶೇ. 37ಕ್ಕೆ ಏರಿಕೆಯಾಗಿದ್ದು ಹೇಗೆ ಎಂಬುದರ ವಿಮರ್ಶೆಯನ್ನು ಕಾಂಗ್ರೆಸ್ ಮಾಡಬೇಕಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ
ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್, ಅಭಿಷೇಕ್ ಮನು ಸಿಂಘ್ವಿ ಕೂಡ ಪ್ರಧಾನಿಯವರನ್ನು ಹೊಗಳಿದ್ದರು. ಜತೆಗೆ ತರೂರ್ರನ್ನು ಬೆಂಬಲಿಸಿದ್ದರು. ಇದೇ ವೇಳೆ ನೋಟಿಸ್ಗೆ ಉತ್ತರಿಸಿರುವ ತರೂರ್, “ಮೋದಿಯವರು ಕೆಲವಾರು ಶ್ಲಾಘನೀಯ ಕೆಲಸಗಳನ್ನೂ ಮಾಡಿದ್ದಾರೆ. ಅದರ ಜತೆಯಲ್ಲೇ, ಅವರು ತಮ್ಮ ವರ್ಚಸ್ಸಿನ ಮೇಲೆ ಬರಬಹುದಾದ ಮತಗಳನ್ನು ಶೇ. 31ರಿಂದ ಶೇ. 37ಕ್ಕೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕಳೆದೆರಡೂ ಚುನಾವಣೆಗಳಲ್ಲಿ ಕೇವಲ ಶೇ. 19ರಷ್ಟು ಮತ ಹಂಚಿಕೆಯನ್ನಷ್ಟೇ ಪಡೆದಿರುವ ನಾವು, ಯಾವ ಕಾರಣಗಳಿಗಾಗಿ ಮೋದಿ ಹಾಗೂ ಬಿಜೆಪಿ ಮತಹಂಚಿಕೆಗಳನ್ನು ಹೆಚ್ಚಿಸಿಕೊಂಡಿತು ಎಂಬುದನ್ನು ಅರ್ಥೈಸುವ ಪ್ರಯತ್ನ ಮಾಡಬೇಕಿದೆ’ ಎಂದಿದ್ದಾರೆ.