ರಾಜಸ್ಥಾನ: ಚೆನ್ನೈ ಇನ್ಸ್ಪೆಕ್ಟರ್ ದುಷ್ಕರ್ಮಿಗಳ ಗುಂಡಿಗೆ ಬಲಿ
Team Udayavani, Dec 13, 2017, 3:51 PM IST
ಜೋಧ್ಪುರ : ಕೆಲವು ವಾರಗಳ ಹಿಂದೆ ನಡೆದಿದ್ದ ಕೊಳತೂರು ಗಿರವಿ ಅಂಗಡಿ ಕಳವಿನ ಪ್ರಕರಣದ ಶಂಕಿತರನ್ನು ಹಿಡಿಯುವ ಯತ್ನದಲ್ಲಿದ್ದ ತಮಿಳು ನಾಡಿನ ಮಧುರಾವೋಯಲ್ ಕಾನೂನು ಮತ್ತು ಸುವ್ಯವಸ್ಥೆ ಇನ್ಸ್ಪೆಕ್ಟರ್ ಎಸ್ ಪೆರಿಯಪಾಂಡಿ ಅವರನ್ನು ಗುಂಡಿಕ್ಕಿ ಸಾಯಿಸಲಾಗಿದೆ.
ಕೊಳತೂರಿನ ಗಿರವಿ ಅಂಗಡಿಯೊಂದರಲ್ಲಿ ಭಾರೀ ಕಳ್ಳತನ ನಡೆಸಿದ್ದ ರಾಜಸ್ಥಾನದ ಪಾಲಿ ಜಿಲ್ಲೆಯ ನಾಥೂರಾಮ್ ಮತ್ತು ಆತನ ಸಹವರ್ತಿ, ಜೋಧಪುರ ಚೌಧರಿ ಅವರನ್ನು ಸೆರೆ ಹಿಡಿಯುವ ವಿಶೇಷ ತಂಡದ ನೇತೃತ್ವವನ್ನು ಪೆರಿಯಪಾಂಡಿ ವಹಿಸಿದ್ದರು.
ಆರೋಪಿಗಳು ಪಾಲಿ ಜಿಲ್ಲೆಯ ರಾಮಪುರ ಕಲನ್ ಗ್ರಾಮದಲ್ಲಿನ ಗೋದಾಮೊಂದರಲ್ಲಿ ಅಡಗಿ ಕುಳಿತ ಮಾಹಿತಿ ಪಡೆದ ಪೆರಿಯಪಾಂಡಿ ತಂಡ ಅಲ್ಲಿಗೆ ಹೋಗಿದ್ದಾಗ ನಾಥೂರಾಮ್ ಮತ್ತು ಆತನ ಸಹಚರ, ಪೆರಿಯಪಾಂಡಿ ಅವರ ಸರ್ವೀಸ್ ಪಿಸ್ತೂಲನ್ನು ಕಸಿದುಕೊಂಡು ಅದರಿಂದಲೇ ಗುಂಡೆಸೆದು ಪೆರಿಯಪಾಂಡಿ ಅವರನ್ನು ಕೊಂದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ