ಏನಿರಲಿದೆ ಟೌನ್ಶಿಪ್ನಲ್ಲಿ? ಶರಣಾದ ನಕ್ಸಲರಿಗಾಗಿ ಟೌನ್ಶಿಪ್!
ಸುಮಾರು 12 ಯೋಜನೆಗಳ ಫಲಾನುಭವಿಗಳಾಗಿದ್ದಾರೆ.
Team Udayavani, Aug 12, 2021, 5:23 PM IST
ದಂತೇವಾಡ (ಛತ್ತೀಸ್ಗಡ): ಭದ್ರತಾ ಪಡೆಗಳಿಗೆ ಶರಣಾರಾಗಿರುವ ನಕ್ಸಲರು ಹಾಗೂ ನಕ್ಸಲರ ಕುಕೃತ್ಯಗಳಿಗೆ ತುತ್ತಾದ ವ್ಯಕ್ತಿಗಳಿಗಾಗಿ ದೇಶದಲ್ಲೇ ಮೊದಲ ಬಾರಿಗೆ ಛತ್ತೀಸ್ಗಡದ ದಂತೇವಾಡದಲ್ಲಿ ಹೊಸ ಟೌನ್ಶಿಪ್ ನಿರ್ಮಿಸಲಾಗುತ್ತದೆ.
ಈ ಕುರಿತಂತೆ ಮಾಹಿತಿ ನೀಡಿರುವ ದಂತೇವಾಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್, “ಕಳೆದ ವರ್ಷ,ಸಕ್ರಿಯ ನಕ್ಸರಲನ್ನು ಹಿಂಸಾಮಾರ್ಗ ದಿಂದ ಹೊರತರುವ ಉದ್ದೇಶದಿಂದ ಲೊನ್ ವರಾತು (ಮನೆಗೆ ಮರಳಿ) ಎಂಬ ಅಭಿಯಾನವನ್ನು ಆರಂಭಿಸಿದ್ದೆವು.
ಅಭಿಯಾನ ಶುರುವಾದ ವರ್ಷದೊಳಗೆ 381 ನಕ್ಸಲರು ಶರಣಾಗಿದ್ದರು. ಲೊನ್ ವರಾತು -2 ಎಂಬ ಮತ್ತೊಂದು ಅಭಿಯಾನ ಮಾಡಿ, ಸುಮಾರು 12 ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈಗ ಅವರಿಗೆ ಆಶ್ರಯ ಕಲ್ಪಿಸಲಾಗಿದೆ. ಇದು ಇತರ ಪ್ರಾಂತ್ಯಗಳ ನಕ್ಸಲರ ಮನಃಪರಿವರ್ತನೆಗೆ ಕಾರಣವಾಗಬಹುದು” ಎಂದರು.
ಏನಿರಲಿದೆ ಟೌನ್ಶಿಪ್ನಲ್ಲಿ?: ಟೌನ್ ಶಿಪ್ನಲ್ಲಿ ಒಂದು ಕೋಣೆಯಿರುವ 108 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿನ ಜನರ ಅವಶ್ಯಕತೆಗಳನ್ನು ಪೂರೈಸಲು 20 ಅಂಗಡಿ ಮಳಿಗೆಗಳನ್ನು ಆರಂಭಿಸಲಾಗುತ್ತದೆ.ಇಲ್ಲಿ ಆರೋಗ್ಯಹಾಗೂಮಹಿಳೆಯರ ಮಕ್ಕಳ ಆರೈಕೆ ಕೇಂದ್ರ, ಗ್ರಾಮೀಣಾಭಿವೃದ್ಧಿ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ.ಇದಲ್ಲದೆ, 20 ಕೊಠಡಿಗಳುಳ್ಳ ತಾತ್ಕಾಲಿಕ ಹಾಸ್ಟೆಲ್ ಒಂದನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ನಕ್ಸಲರಿಂದ ಹಿಂಸೆಗೆ ಒಳಗಾದವರು ಜೀವಿಸಬಹುದು.
ಜೀವನೋಪಾಯಕ್ಕೆ ದಾರಿ: ಟೌನ್ಶಿಪ್ ನಲ್ಲಿ ಹೊಸ ಜೀವನ ಶುರು ಮಾಡುವ ಮಾಜಿ ನಕ್ಸಲರ ಆರ್ಥಿಕಾಭಿವೃದ್ಧಿಗೆ ಬೇಕಿರುವ ದಾರಿಗಳನ್ನು ಕಲ್ಪಿಸಲಾಗುತ್ತದೆ
ಎಂದು ಪಲ್ಲವ್ ತಿಳಿಸಿದ್ದಾರೆ. “ಅಲ್ಲಿ, ಕೌಶಲ್ಯಾಭಿವೃದ್ಧಿಕೇಂದ್ರಇರಲಿದೆ.ಇಲೆಕ್ಟ್ರಿಕ್ ಕೆಲಸಗಳು, ರಿಪೇರಿ ಕೆಲಸಗಳು, ವೈಜ್ಞಾನಿಕ ಮಾದರಿಯ ಕೃಷಿ ಹಾಗೂ ಹೈನುಗಾರಿಕೆ ಕಲಿಸಿಸ್ವಾವಲಂಬಿಗಳನ್ನಾಗಿಸಲುಪ್ರಯತ್ನಿಸ ಲಾಗುತ್ತದೆ” ಎಂದು ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ