ಲೇಖಕ ತಾರೀಕ್ ಫತಾಹ್ ಹತ್ಯೆ ಸಂಚು: ಛೋಟಾ ಶಕೀಲ್ ಬಂಟ ಸೆರೆ
Team Udayavani, Jun 9, 2017, 11:27 AM IST
ಹೊಸದಿಲ್ಲಿ : ಪಾಕ್ ಸಂಜಾತ ಕೆನಡ ಲೇಖಕ ತಾರಿಕ್ ಫತಾಹ್ ಅವರನ್ನು ಕೊಲ್ಲುವ ಯೋಜನೆ ಹೊಂದಿದ್ದ ಗ್ಯಾಂಗ್ಸ್ಟರ್ ಛೋಟಾ ಶಕೀಲ್ ನ ನಿಕಟವರ್ತಿ ಜುನೇದ್ ಚೌಧರಿ ಎಂಬಾತನನ್ನು ದಿಲ್ಲಿ ಪೊಲೀಸ್ನ ವಿಶೇಷ ದಳ ಬಂಧಿಸಿದೆ.
ಜುನೇದ್ ನನ್ನು ಜೂನ್ 7 ಮತ್ತು 8ರ ನಡುವಿನ ರಾತ್ರಿ ಈಶಾನ್ಯ ದಿಲ್ಲಿಯ ವಝೀರಾಬಾದ್ ರಸ್ತೆಯಲ್ಲಿ ಸೆರೆ ಹಿಡಿಯಲಾಯಿತು ಎಂದು ಪೊಲೀಸ್ ಡೆಪ್ಯುಟಿ ಕಮಿಷನರ್ ಪಿ ಎಸ್ ಕುಶವಾಹ್ ತಿಲಿಸಿದ್ದಾರೆ.
ಜುನೇದ್ ಯಾರನ್ನು ಗುರಿ ಇರಿಸಿಕೊಂಡು ಕೊಲ್ಲುವ ಯೋಜನೆ ಹೊಂದಿದ್ದ ಎಂಬುದನ್ನು ತಿಳಿಸಲು ಡಿಸಿಪಿ ನಿರಾಕರಿಸಿದರಾದರೂ, ಅನಾಮಿಕ ಪೊಲೀಸ್ ಅಧಿಕಾರಿಯೋರ್ವರು, “ಜುನೇದ್ನ ಗುರಿ ಪಾಕ್ ಸಂಜಾತ ಕೆನಡ ಲೇಖಕ ತಾರಿಕ್ ಫತಾಹ್ ಆಗಿದ್ದರು’ ಎಂದು ತಿಳಿಸಿದ್ದಾರೆ.
ಫತಾಹ್ ಅವರು ಈ ಸಂದರ್ಭದಲ್ಲಿ ದಿಲ್ಲಿಯಲ್ಲಿ ಇಲ್ಲವಾದರೂ ಅವರನ್ನು ಕೊಲ್ಲುವ ಸಂಚು ರೂಪಿಸುವುದೇ ಜುನೇದ್ನ ಯೋಜನೆಯಾಗಿತ್ತು ಎಂದವರು ಹೇಳಿದರು.
ಜುನೇದ್ ಚೌಧರಿಯನ್ನು ಇತರ ಮೂವರೊಂದಿಗೆ ಶಸ್ತ್ರಾಸ್ತ್ರ ಹಾಗೂ ಹವಾಲಾ ಹಣದ ಸಹಿತ ಕಳೆದ ಜೂನ್ನಲ್ಲೇ ಸೆರೆ ಹಿಡಿಯಲಾಗಿತ್ತು. ಆದರೆ ಈಗ ನಾಲ್ಕು ತಿಂಗಳ ಹಿಂದೆ ಜುನೇದ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆ ದಿನಗಳಲ್ಲಿ ಜುನೇದ್ ಮತ್ತು ಆತನ ಸಹಚರರು ಹಿಂದೂ ಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಅವರನ್ನು ಕೊಲ್ಲುವ ಸಂಚು ರೂಪಿಸುತ್ತಿದ್ದರು.
ಆಗ ಜುನೇದ್ ಛೋಟಾ ಶಕೀಲ್ ನನ್ನು ಸಂಪರ್ಕಿಸಿದ್ದ. ಬೇಲ್ ರದ್ದಾದ ಬಳಿಕ ಆತನನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಅನಂತರ ಆತ ಪುನಃ ಬೇಲ್ ಪಡೆದು ಹೊರಬಂದಿದ್ದ ಮತ್ತು ಶಕೀಲ್ ಸಂಪರ್ಕ ಬೆಳೆಸಿಕೊಂಡಿದ್ದ.
ಹಾಗೆ ಬೇಲ್ನಲ್ಲಿ ಹೊರ ಬಂದ ಜುನೇದ್ ಚೌಧರಿ ದಿಲ್ಲಿಯಲ್ಲಿ ಛೋಟಾ ಶಕೀಲ್ನ ಚಟುವಟಿಕೆಗಳನ್ನು ನಡೆಸುತ್ತಿದ್ದ. ಪ್ರಕೃತ ಆತನನ್ನು ಆಮೂಲಾಗ್ರವಾಗಿ ಪ್ರಶ್ನಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು