ಸಸ್ಯಾಹಾರಿ ಆಹಾರದಲ್ಲಿ ಕೋಳಿ ತುಂಡು ಪತ್ತೆ: ತನಿಖೆ; ಮುಖ್ಯಮಂತ್ರಿ
Team Udayavani, Jun 21, 2019, 1:09 PM IST
ಮುಂಬಯಿ: ರಾಜ್ಯ ವಿಧಾನ ಭವನದ ಕ್ಯಾಂಟೀನ್ನಲ್ಲಿ ಬಡಿಸಲಾದ ಸಸ್ಯಾಹಾರಿ ಆಹಾರದಲ್ಲಿ ಕೋಳಿ ತುಂಡು ಪತ್ತೆಯಾಗಿರುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ ಅವರು, ಈ ಆಹಾರವನ್ನು ಸಿದ್ಧಪಡಿಸಿದ ಅಡುಗೆಮನೆಯು ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆಯೇ ಎಂದು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಎನ್ಸಿಪಿ ಸದಸ್ಯ ಅಜಿತ್ ಪವಾರ್ ಅವರು ಈ ವಿಷಯವನ್ನು ಎತ್ತಿದಾಗ ಮಾತನಾಡಿದ ಫಡ್ನವೀಸ್ ಅವರು, ಇಂತಹ ಘಟನೆ ಮರುಕಳಿಸದಂತೆ ಕ್ಯಾಂಟೀನ್ ಸಿಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗುವುದು ಎಂದರು. ಬುಧವಾರ ಸರಕಾರಿ ಅಧಿಕಾರಿಯೊಬ್ಬರು ವಿಧಾನ ಭವನದ ಕ್ಯಾಂಟೀನ್ನಲ್ಲಿ “ಮಟ್ಕಿ ಉಸಾಲ್ ‘ (ಮಹಾರಾಷ್ಟ್ರದ ಸಸ್ಯಾಹಾರಿ ಖಾದ್ಯ) ಅನ್ನು ಆರ್ಡರ್ ಮಾಡಿದಾಗ ಅದರಲ್ಲಿ ಕೋಳಿ ತುಂಡುಗಳು ಪತ್ತೆಯಾಗಿವೆ. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಸದಸ್ಯ ವಿಜಯ್, ಇತ್ತೀಚೆಗೆ ನಾಗಪುರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ರೋಗಿಗೆ ನೀಡಲಾದ ಆಹಾರದಲ್ಲಿ ಸೆಗಣಿ ತುಂಡು ಪತ್ತೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇದು ಗಂಭೀರ ವಿಷಯವಾಗಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ