ಕಣ್ಣೂರು ಠಾಣೆಯಲ್ಲಿ ಮಕ್ಕಳ ಆಸ್ಪತ್ರೆ
Team Udayavani, Jan 16, 2018, 6:10 AM IST
ತಿರುವನಂತಪುರಂ: ಮಕ್ಕಳ ಮನಸ್ಸಿನಲ್ಲಿ ಪೊಲೀಸ್ ಠಾಣೆ ಎಂದರೆ ಅದು ಕತ್ತಲೆ ತುಂಬಿರುವ ಬೀಭತ್ಸ ಕೋಣೆ. ಪೊಲೀಸರು ಎಂದರೆ ಸದಾ ಮುಖ ಗಂಟಿಕ್ಕಿಕೊಂಡು ಖಾಕಿ ಬಟ್ಟೆ ತೊಟ್ಟಿರುವ ಕ್ರೂರಿಗಳು ಎಂಬ ಕಲ್ಪನೆಯೇ ಮನೆಮಾಡಿರುತ್ತದೆ. ಮಕ್ಕಳಲ್ಲಿರುವ ಈ ಕಲ್ಪನೆ ಹೋಗಲಾಡಿಸುವಂಥ ಪೊಲೀಸ್ ಠಾಣೆ ಕೇರಳದಲ್ಲಿದೆ. ಪೊಲೀಸ್ ಠಾಣೆ ಎಂದ ಕೂಡಲೇ ನಗು ಮೊಗದ ವೈದ್ಯರ ಚಿತ್ರಣ ಮತ್ತು ಆಕರ್ಷಕ ಗೋಡೆ ಚಿತ್ರಗಳು ಮಕ್ಕಳ ಮನಸ್ಸಿನಲ್ಲಿ ಮೂಡುವಂತಿದೆ ಇಲ್ಲಿಯ ಕಣ್ಣೂರು ಜಿಲ್ಲೆಯ ಒಂದು ಪೊಲೀಸ್ ಠಾಣೆ.
ಈ ಠಾಣೆಗೆ ವೈದ್ಯರು ಬರುತ್ತಾರೆ. ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ಜೈಲಿನ ಗೋಡೆಗಳ ಮೇಲೆ ಆಕರ್ಷಕವಾದ ಚಿತ್ರಗಳನ್ನು ಬಿಡಿಸಲಾಗಿದೆ. ಇದು ಕೂಡ ಮಕ್ಕಳ ಮನಸ್ಸನ್ನು ಹಿಡಿದಿಡುತ್ತದೆ. ಕಣ್ಣೂರು ಪಟ್ಟಣದ ಪೊಲೀಸ್ ಠಾಣೆಗೆ ಪ್ರತಿ ಭಾನುವಾರ ಮಕ್ಕಳ ತಜ್ಞರು ಬಂದು ಮಕ್ಕಳಿಗೆ “ಮಕ್ಕಳ-ಸ್ನೇಹಿ ಘಟಕ’ದಲ್ಲಿ ಚಿಕಿತ್ಸೆ ನೀಡುತ್ತಾರೆ. ಇದು ರಾಜ್ಯ ಸರಕಾರದ ಸಮುದಾಯ ಪೊಲೀಸ್ ಕಾರ್ಯಕ್ರಮದ ಭಾಗ. ಈ ಕಾರ್ಯಕ್ರಮದ ಇಲ್ಲಿಯ ಸರ್ಕಲ್ ಇನ್ಸ್ಪೆಕ್ಟರ್ ಟಿ.ಕೆ. ರತ್ನಕುಮಾರ್ರದ್ದು ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ಸಾರ್ವಜನಿಕ ರಜೆ ಆದ್ದರಿಂದ ಪಟ್ಟಣದಲ್ಲಿ ವೈದ್ಯರ ಸೇವೆ ಲಭ್ಯವಿರುವುದಿಲ್ಲ. ಆದ್ದರಿಂದ ಪ್ರತಿ ಭಾನುವಾರ ಬೆಳಗ್ಗೆ 10ರಿಂದ 1 ಗಂಟೆವರೆಗೂ ಮಕ್ಕಳ ತಜ್ಞರ ಸೇವೆ ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ. 14 ವೈದ್ಯ ಮಂಡಳಿ ಇಲ್ಲಿ ತಪಾಸಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ