ಪಾಕ್ ಬಂದರಿಗೆ ಬಂತು ಡ್ರ್ಯಾಗನ್!
ಗ್ವದಾರ್: ಭದ್ರ ನೌಕಾನೆಲೆ ಮಾಡಿಕೊಂಡ ಚೀನ
Team Udayavani, Jun 4, 2020, 7:36 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಚೀನದ ಯುದ್ಧ ದಾಹ ಯಾಕೋ ಎಲ್ಲೆಮೀರಿದೆ. ಒಂದೆಡೆ ಲಡಾಖ್ನ ಗಡಿಯಲ್ಲಿ ಪೀಪಲ್ಸ್ ಲಿಬ ರೇಶನ್ ಆರ್ಮಿ ಠಿಕಾಣಿ ಹೂಡಿದ್ದರೆ, ಇನ್ನೊಂದೆಡೆ ಚೀನದ ನೌಕಾದಳವು ಪಾಕಿಸ್ಥಾನದ ಗ್ವದಾರ್ ಬಂದರನ್ನು ಭದ್ರ ಯುದ್ಧ ನೆಲೆಯನ್ನಾಗಿ ಮಾಡಿಕೊಳ್ಳುತ್ತಿದೆ. ಉಪಗ್ರಹ ತೆಗೆದ ಚಿತ್ರಗಳಲ್ಲಿ ಗ್ವದಾರ್ನಲ್ಲಿ ಚೀನ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಸ್ಪಷ್ಟವಾಗಿ ಗೋಚರಿಸಿವೆ. ಅತ್ಯಂತ ವೇಗದಲ್ಲಿ ಗ್ವದಾರ್ ಬಂದರಿನ ಚಹರೆಯನ್ನೇ ಬದಲಿಸಿರುವ ಚೀನ, ಅಲ್ಲಿ ಅತ್ಯಾಧುನಿಕ ನೌಕಾನೆಲೆ ನಿರ್ಮಿಸಿದೆ ಎಂದು ಭಾರತೀಯ ರಕ್ಷಣಾ ತಜ್ಞರು ಮಾಹಿತಿ ನೀಡಿದ್ದಾರೆ.
“ಕಾರಿಡಾರ್’ ಕಟಾಕ್ಷ: ಚೀನವು ಪಾಕಿಸ್ಥಾನದಲ್ಲಿ ಕೈಗೊಂಡ 46 ಬಿಲಿಯನ್ ಡಾಲರ್ ವೆಚ್ಚದ ಆರ್ಥಿಕ ಕಾರಿಡಾರ್ ಯೋಜನೆಯಡಿ ಗ್ವದಾರ್ ಬಂದರನ್ನು ನವೀಕರಿಸುತ್ತಿದೆ. ಯುದ್ಧ ಸಾಮಗ್ರಿ, ಇತ್ಯಾದಿ ಸರಕು ಸಾಗಾಟಕ್ಕಾಗಿ ಚೀನ ಈ ಕಾರಿಡಾರನ್ನು ಬಳಸಿ ಕೊಳ್ಳುತ್ತಿದೆ. ಪಾಕ್ನ ಗ್ವದಾರ್ ಮುಖ್ಯವಾಗಿ ಇರಾನ್ಗೆ ಅತ್ಯಂತ ಹತ್ತಿರದಲ್ಲಿದೆ. ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾ ಸಾಗರ ಮಾರ್ಗಗಳ ಮೇಲೆ ವ್ಯಾಪಾರ ಹಿಡಿತ ಸಾಧಿಸಲು ಚೀನ ಈ ಬಂದ ರನ್ನು ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.
ನಿರ್ಮಾಣ ಹೇಗಿದೆ?: ಚೀನದ 100ಕ್ಕೂ ಅಧಿಕ ಎಂಜಿನಿಯರ್ಗಳು ಗ್ವದಾರ್ನ ನವೀಕರಣದಲ್ಲಿ ತೊಡ ಗಿದ್ದಾರೆ. ಬಂದರಿನ ಸುತ್ತಲೂ ವಿದ್ಯುತ್ ಬೇಲಿ ಒಳಗೊಂಡ ಎತ್ತರದ ಕಾಂಪೌಂಡ್ಗಳನ್ನು ನಿರ್ಮಿ ಸಲಾಗಿದೆ. ಯಾವುದೇ ದಾಳಿಗೂ ನಲುಗದಂತೆ ಗಟ್ಟಿಗೊಳಿಸುತ್ತಿದೆ. ಚೀನ ನೌಕಾ ಪಡೆಯ ಸುಸಜ್ಜಿತ ಬೋಟ್ಗಳೂ ತೀರದಲ್ಲಿ ನಿಯೋಜನೆಗೊಂಡಿವೆ.
ಶನಿವಾರ ಮಾತುಕತೆ
ಪೂರ್ವ ಲಡಾಖ್ನಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಸಂಬಂಧ ಭಾರತ- ಚೀನದ ಉನ್ನತ ಮಟ್ಟದ ಸೇನಾಧಿಕಾರಿಗಳು ಜೂ.6ಕ್ಕೆ ಮಾತು ಕತೆ ನಡೆಸಲಿದ್ದಾರೆ. ಭಾರತದ ಗಡಿಯ ಮೀಟಿಂಗ್ ಪಾಯಿಂಟ್, ಚುಷುಲ್- ಮೊಲ್ಡೊನಲ್ಲಿ ಮಾತುಕತೆ ಜರಗಲಿದೆ. ಭಾರತದ ಪರವಾಗಿ ಲೆ.ಜ. ಹರಿಂದರ್ ಸಿಂಗ್ ಪಾಲ್ಗೊಳ್ಳಲಿದ್ದಾರೆ. ಹಲವು ಸುತ್ತಿನ ಮಾತು ಕತೆಗಳು ಮುರಿದುಬಿದ್ದಿದ್ದು, ಈ ಬಾರಿ ಧನಾ ತ್ಮಕ ಫಲಿತಾಂಶ ಸಿಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ