ಲಡಾಕ್ನಲ್ಲಿ ಭಾರತ ಸೇನೆ ಜತೆಗಿನ ಜಟಾಪಟಿ ಗೊತ್ತೇ ಇಲ್ಲ: ಚೀನ
Team Udayavani, Aug 16, 2017, 4:09 PM IST
ಬೀಜಿಂಗ್ : “ಲಡಾಕ್ ವಲಯದಲ್ಲಿ ಭಾರತ ಮತ್ತು ನಮ್ಮ ಸೇನೆ ನಡುವೆ ಜಟಾಪಟಿ ನಡೆದಿದೆ ಎಂಬ ವಿಷಯ ನಮಗೆ ಗೊತ್ತೇ ಇಲ್ಲ” ಎಂದು ಹೇಳಿರುವ ಚೀನ, ವಿವಾದಿತ ಡೋಕ್ಲಾಂ ನಿಂದ ಭಾರತ ತನ್ನ ಸೇನೆಯನ್ನು ತತ್ಕ್ಷಣ ಹಿಂದೆಗೆಯಬೇಕು ಎಂದು ಮತ್ತೆ ಅಪ್ಪಣೆ ಮಾಡಿದೆ.
ಲಡಾಕ್ನಲ್ಲಿನ ಪಾಂಗೋಂಗ್ ಸರೋವರ ಸಮೀಪ ಭಾರತ ಮತ್ತು ಚೀನ ಸೈನಿಕರು ಇಂದು ಬೆಳಗ್ಗೆ ಮಾತಿನ ಜಗಳ ನಡೆಸಿ, ಪರಸ್ಪರರ ಮೇಲೆ ಕಲ್ಲೆಸೆದುಕೊಂಡು, ಕೆಲವು ಸೈನಿಕರು ಗಾಯಗೊಂಡ ಜಟಾಪಟಿಯು ನಡೆದಿರುವುದಾಗಿ ಕೆಲವು ಮಾಧ್ಯಮ ವರದಿಗಳು ತಿಳಿಸಿದ್ದವು.
ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಚೀನ ವಿದೇಶ ಸಚಿವಾಲಯದ ವಕ್ತಾರ ಹು ಶುನ್ಯಾಂಗ್ “ಆ ಬಗ್ಗೆ ನಮಗೇನೂ ಮಾಹಿತಿ ಇಲ್ಲ. ಗಡಿಯಲ್ಲಿನ ಚೀನೀ ಪಡೆಗಳು ಶಾಂತಿ ಕಾಯ್ದುಕೊಳ್ಳುವುದಕ್ಕೆ ಬದ್ಧವಾಗಿವೆ’ ಎಂದು ಹೇಳಿದರು.
ಚೀನೀ ಪಡೆಗಳು ಲಡಾಕ್ನಲ್ಲಿ ಭಾರತದ ಗಡಿಯೊಳಗೆ ಅತಿಕ್ರಮಣ ನಡೆಸಿರುವುದನ್ನು ಭಾರತೀಯ ಯೋಧರು ಪರಿಣಾಮಕಾರಿಯಾಗಿ ತಡೆದಿದ್ದಾರೆ ಎಂಬ ವರದಿಗಳು ಇಂದು ಬೆಳಗ್ಗೆ ಬಂದಿದ್ದವು.
ಲಡಾಕ್ ಗಡಿಯನ್ನು ಅತಿಕ್ರಮಿಸಿ ಭಾರತದೊಳಗೆ ಬಂದ ಚೀನೀ ಸೈನಿಕರು ತಮ್ಮೊಂದಿಗೆ ಕಬ್ಬಿಣದ ರಾಡ್ಗಳನ್ನು, ಕಲ್ಲುಗಳನ್ನು ಹೊಂದಿದ್ದರು. ಭಾರತೀಯ ಸೈನಿಕರು ಚೀನೀಯರ ಈ ಅತಿಕ್ರಮಣವನ್ನು ತಡೆದಾಗ ಅವರು ಕಲ್ಲು ತೂರಲು ಆರಂಭಿಸಿದರು. ಭಾರತೀಯ ಸೈನಿಕರು ತಕ್ಕುದಾದ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿ ಚೀನೀಯರ ಅತಿಕ್ರಮಣ ಯತ್ನವನ್ನು ವಿಫಲಗೊಳಿಸಿದರು ಎಂದು ವರದಿಗಳು ಹೇಳಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ