ಶ್ರೀ ರವಿಶಂಕರ್ ಗುರೂಜಿಯವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
Team Udayavani, Jan 25, 2023, 3:34 PM IST
ಸತ್ಯಮಂಗಲ: ಹವಾಮಾನ ವೈಪರೀತ್ಯದಿಂದಾಗಿ ‘ಆರ್ಟ್ ಆಫ್ ಲಿವಿಂಗ್’ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿಯವರಿದ್ದ ಹೆಲಿಕಾಪ್ಟರ್ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಮಂಜು ಕವಿದ ವಾತಾವರಣದಿಂದಾಗಿ ಇಂದು ಬೆಳಗ್ಗೆ ಸತ್ಯಮಂಗಲದಲ್ಲಿ ಲ್ಯಾಂಡ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ತನ್ನ ಗಮ್ಯಸ್ಥಾನಕ್ಕೆ ತೆರಳಿತು ಎಂದು ಅವರು ಹೇಳಿದರು.