ರಿಲಯನ್ಸ್ ಫೌಂಡೇಶನ್ನಿಂದ ಕ್ರಿಸ್ಮಸ್ ಸಂಭ್ರಮ
Team Udayavani, Dec 28, 2019, 3:10 AM IST
ಮುಂಬೈ: ರಿಲಯನ್ಸ್ ಫೌಂಡೇಶನ್ನ ಸ್ಥಾಪಕ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು 4000 ಬಡ ಮಕ್ಕಳಿಗಾಗಿ ನೂತನ ಜಿಯೋ ವೊಂಡರ್ಲ್ಯಾಂಡ್ನಲ್ಲಿ ಅದ್ಧೂರಿ ಕ್ರಿಸ್ ಮಸ್ ಸಂಭ್ರಮ ವನ್ನು ಆಯೋಜನೆ ಮಾಡಿದ್ದರು. ಮಕ್ಕಳು ಈ ಸಮಯದಲ್ಲಿ ಕುಣಿದು- ಕುಪ್ಪಳಿಸಿದ್ದಾರೆ, ಸಂಭ್ರಮವನ್ನು ಆನಂದಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬೈನ ಹೊಸ ಹಬ್ಬದ ಉತ್ಸಾಹ ನಿರ್ಮಾಣವಾಗಿದ್ದು, ಜಿಯೋ ವಂಡರ್ಲ್ಯಾಂಡ್ ಮುಂಬೈ ನಗರದ ವಾರ್ಷಿಕ ಮೆಗಾ- ಉತ್ಸಾಹ ಕಾರ್ಯಕ್ರಮದಲ್ಲಿ ಒಂದಾಗಲಿದೆ.
ಅಂತಾರಾಷ್ಟ್ರೀಯ ಕಾರ್ನಿವೆಲ್ಗಳಿಗೆ ಸಮನಾದ ರೀತಿಯಲ್ಲಿಯೇ ಜಿಯೋ ವಂಡರ್ಲ್ಯಾಂಡ್ ನಿರ್ಮಾಣವಾಗಿದ್ದು, ಇಲ್ಲಿ ಮಕ್ಕಳಿಗೆ ಡ್ರೋನ್ ಶೋಗಳು, ಮ್ಯಾಜಿಕ್ ಆಕ್ಟ್ಗಳು, ಫೆರ್ರಿಸ್ ವೀಲ್, ವಿವಿಧ ಪಾರ್ಕ್ಗಳು, ಸಾಂತಾ ಕ್ಲಾಸ್, ಫೋಟೋ ಬೂತ್ಗಳು ಮತ್ತು ಇನ್ನಿತರ ಮನರಂಜನೆಯ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು, ಇದಲ್ಲದೇ ಹ್ಯಾಮ್ಲಿಸ್ ಫ್ಯಾಮಿಲಿಯ ಹ್ಯಾಮ್ಲೆ ಮತ್ತು ಹ್ಯಾಟ್ಟಿ ಬಿರ್ ಸೇರಿ ವಿಶೇಷ ಪಾತ್ರಗಳ ಮೆರವಣಿಗೆ ಹೆಚ್ಚುವರಿ ಮೆರಗು ತಂದಿತು. ಇದೇ ವೇಳೆ ನಿತಾ ಅಂಬಾನಿ ಮತ್ತು ಸಾಂತಾ ಮಕ್ಕಳಿಗೆ ವಿಶೇಷ ಉಡುಗೊರೆ ವಿತರಿಸಿದರು.
ರಿಲಯನ್ಸ್ ಫೌಂಡೇಶನ್ನ ಸ್ಥಾಪಕ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಮಾತ ನಾಡಿ, ಇದು ಅತ್ಯಂತ ಸಂತೋಷದ ಕ್ಷಣವಾಗಿದೆ. ಮಕ್ಕಳೊಂದಿಗೆ ಖುಷಿ ಯನ್ನು ಹಂಚಿಕೊಳ್ಳ ಬೇಕು. ಮಕ್ಕಳು ಸಮಗ್ರ ಜೀವನ ದೃಷ್ಟಿಕೋನಕ್ಕೆ ಅರ್ಹ ರಾಗಿದ್ದಾರೆ ಮತ್ತು ಹಬ್ಬದ ಋತುವಿನ ಸಂತೋಷ ಸೇರಿದಂತೆ ಪ್ರತಿ ಮಗುವು ಆಡುವ ಹಕ್ಕನ್ನು ಹೊಂದಿರಬೇಕು. ಇದಕ್ಕಾಗಿಯೇ ರಿಲಯನ್ಸ… ಫೌಂಡೇಶನ್ 4000 ಬಡ ಮಕ್ಕಳಿಗೆ ಹೊಸ ಜಿಯೋ ವಂಡರ್ಲ್ಯಾಂಡ್ ಅನುಭವದ ಅವಕಾಶ ಮಾಡಿಕೊಟ್ಟಿದೆ ಎಂದರು.
ನೀತಾ ಅಂಬಾನಿ ಅವರೊಂದಿಗೆ ಇಶಾ ಅಂಬಾನಿ ಪಿರಮಾಲ್ ಅವರು ಜಿಯೋ ವಂಡರ್ಲ್ಯಾಂಡ್ ಪ್ರಾರಂಭ ವನ್ನು ನೆನಪಿನಲ್ಲಿ ಇರಿಸುವ ಸಲುವಾಗಿ ಭಾರತದ ಅತಿ ಎತ್ತರದ ಸುಸ್ಥಿರ ಕ್ರಿಸ್ಮಸ್ ವೃಕ್ಷದ ದೀಪಗಳನ್ನು ಬೆಳಗಿಸುವುದು ಮೂಲಕ ಚಾಲನೆ ನೀಡಿದರು. ರಿಸೈಕಲ್ 4 ಲೈಫ್ ಕ್ರಿಸ್ಮಸ್ ಟ್ರೀ’ ಎನ್ನುವ ಸಂದೇಶವನ್ನು ಸಾರಿಸಿದರು. ನೀತಾ ಅಂಬಾನಿ ಅವರ ನಾಯಕತ್ವದಲ್ಲಿ ರಿಲಯನ್ಸ್ ಫೌಂಡೇಶನ್ 2012 ರಿಂದ ಹಿಂದುಳಿದ ಮಕ್ಕಳಿಗಾಗಿ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸುತ್ತಿದೆ. ರಿಲಯನ್ಸ್ ಫೌಂಡೇಶನ್ ಹ್ಯಾಮ್ಲಿಸ್ ಟಾಯ್ ಡೋನೆಷನ್ ಡ್ರೈವ್ ಅನ್ನು ಸಹ ಬೆಂಬಲಿಸುತ್ತದೆ. ಈ ವರ್ಷ ಭಾರತದಾದ್ಯಂತ 5000ಕ್ಕೂ ಹೆಚ್ಚು ಆಟಿಕೆಗಳನ್ನು ಮಕ್ಕಳಿಗೆ ವಿತರಿಸಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ