ಲಾಕ್ ಡೌನ್ ಸ್ಟೋರಿ: ಹೈದರಾಬಾದ್ ಪ್ರದೇಶದಲ್ಲಿ ಅಪರೂಪದ ಪುಣುಗುಬೆಕ್ಕು, ಚಿರತೆ ಪ್ರತ್ಯಕ್ಷ!
ಕೊನೆಗೂ ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಪುಣುಗು ಬೆಕ್ಕನ್ನು ಹಿಡಿದು ಮರಳಿ ಕಾಡಿಗೆ ಒಯ್ದು ಬಿಟ್ಟಿರುವುದಾಗಿ ವರದಿ ತಿಳಿಸಿದೆ.
Team Udayavani, May 14, 2020, 2:30 PM IST
Representative Image
ಹೈದರಾಬಾದ್:ಕೋವಿಡ್ 19 ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಈ ವೇಳೆ ನಡೆಯುತ್ತಿರುವ ಹಲವು ಸಂಗತಿಗಳು ಗಮನಸೆಳೆಯುವಂತಿದ್ದು, ಹೈದರಾಬಾದ್ ನಲ್ಲಿ ಅಂತಹ ಎರಡು ಘಟನೆಗಳು ನಡೆದಿದೆ.
ಕೋವಿಡ್ 19 ಭೀತಿಯಿಂದ ಜನಸಂಚಾರ ಇಲ್ಲದ ಪರಿಣಾಮ ಹೈದರಾಬಾದ್ ನ ಗೋಲ್ಕೊಂಡಾ ಪ್ರದೇಶದ ದರ್ವಾಝಾ ಎಂಬಲ್ಲಿ ಕಾಡಿನಿಂದ ಬಂದಿದ್ದ ಅಪರೂಪದ ಪುಣುಗು ಬೆಕ್ಕು ಕಂಡು ಬಂದಿತ್ತು. ಕೊನೆಗೂ ಸುದ್ದಿ ತಿಳಿದ ಅರಣ್ಯ ಇಲಾಖೆಯವರು ಪುಣುಗು ಬೆಕ್ಕನ್ನು ಹಿಡಿದು ಮರಳಿ ಕಾಡಿಗೆ ಒಯ್ದು ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಪುಣುಗು ಬೆಕ್ಕು ಎಲ್ಲಿಂದ ಬಂತು ಹಾಗೂ ಈ ಪ್ರದೇಶದೊಳಕ್ಕೆ ಹೇಗೆ ಬಂತು ಎಂಬ ಬಗ್ಗೆ ಅರಣ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಮತ್ತೊಂದು ಪ್ರಕರಣದಲ್ಲಿ ಹೈದರಾಬಾದ್ ನ ಕೈಗಾರಿಕಾ ಪ್ರದೇಶವಾದ ಮೈಲಾರ್ ದೇವಿ ಪಲ್ಲೈ ಸಮೀಪದ ರಸ್ತೆಯಲ್ಲಿ ಗಾಯಗೊಂಡ ಚಿರತೆಯೊಂದು ಪತ್ತೆಯಾಗಿತ್ತು. ತುಂಬಾ ಗಂಭೀರವಾಗಿ ಗಾಯಗೊಂಡಿದ್ದ ಚಿರತೆ ಮೇಲೇಳಲು ಸಾಧ್ಯವಾಗದೆ ಬಿದ್ದಿತ್ತು ಎಂದು ವರದಿ ತಿಳಿಸಿದೆ.
ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ರಕ್ಷಿಸಿದ್ದಾರೆ. ಹೀಗೆ ಲಾಕ್ ಡೌನ್ ನಡುವೆ ಮುಂಬೈಗೆ ಸಾವಿರಾರು ಸಂಖ್ಯೆಯಲ್ಲಿ ಫ್ಲೇಮಿಂಗೋ ವಲಸೆ ಬಂದಿರುವುದು, ನೋಯ್ಡಾದಲ್ಲಿ ನಿಲ್ಗಾಯಿ ಹಾಗೂ ಕೋಲ್ಕತಾ ಪ್ರದೇಶದಲ್ಲಿ ಡಾಲ್ಫಿನ್ಸ್ ಆಗಮಿಸಿರುವ ಬಗ್ಗೆ ವರದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ