ಪುದುಚೇರಿಯಲ್ಲೂ ಸಿಎಂ-ಲೆ| ಗವರ್ನರ್ ಜಟಾಪಟಿ
Team Udayavani, Jan 6, 2017, 3:45 AM IST
ಪುದುಚೇರಿ: ಕೇಂದ್ರಾಡಳಿತ ಪ್ರದೇಶ ದಿಲ್ಲಿಯಲ್ಲಿ ಸಿಎಂ-ಉಪರಾಜ್ಯಪಾಲರ ಸಂಘರ್ಷ ನೋಡಿದ್ದಾಯ್ತು. ಪುದುಚೇರಿ ಉಪ ರಾಜ್ಯಪಾಲೆ ಕಿರಣ್ ಬೇಡಿ ಮತ್ತು ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ.
“ಸರ್ಕಾರಿ ಅಧಿಕಾರಿಗಳು ಫೇಸ್ಬುಕ್, ಟ್ವೀಟರ್, ವಾಟ್ಸಪ್ನಂಥ ಸಾಮಾಜಿಕ ಮಾಧ್ಯಮಗಳನ್ನು ಬಳಸಕೂಡದು. ವಿದೇಶದಲ್ಲಿ ಇವು ಸರ್ವರ್ ಹೊಂದಿದ್ದು, ಇದರಿಂದ ಸರ್ಕಾರದ ಸೂಕ್ಷ್ಮ ಮಾಹಿತಿಗಳು ವಿದೇಶಗಳಿಗೆ ಲಭ್ಯವಾಗಬಹುದು’ ಎಂದು ನಾರಾಯಣಸ್ವಾಮಿ ಜ.2ರಂದು ಆದೇಶ ಹೊರಡಿಸಿದ್ದರು.
ಈ ಆದೇಶವನ್ನು ಗುರುವಾರ ರದ್ದುಗೊಳಿಸಿರುವ ಕಿರಣ್ ಬೇಡಿ, “ಸರ್ಕಾರದ ಆದೇಶವು ಕೇಂದ್ರಾ ಡಳಿತ ಪ್ರದೇಶವಾದ ಪುದುಚೇರಿಯ ಹಿಮ್ಮುಖ ಚಲನೆಗೆ ಕಾರಣವಾಗುತ್ತಿದೆ. ಆಧುನಿಕ ಯುಗದಲ್ಲಿ ಮುಕ್ತ ಸಂವಹನ, ಜನರ ಒಳಗೊಳ್ಳುವಿಕೆ ಅಗತ್ಯವಾಗಿದೆ. ಹೀಗಿದ್ದಾಗ ಮುಕ್ತ ಸಂವಹನದ ಮೇಲೆ ಸರ್ಕಾರ ನಿರ್ಬಂಧ ಹೇಗೆ ಹೇರಲು ಸಾಧ್ಯ? ಜ.2ರ ತೀರ್ಮಾನವನ್ನು ನಾನು ಅಸಿಂಧುಗೊಳಿಸಿದ್ದೇನೆ’ ಎಂದು ಆದೇಶ ಪ್ರತಿಯೊಂದಿಗೆ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಬೇಡಿ ಅವರು ಅಧಿಕಾರಿಗಳ ವಾಟ್ಸಪ್ ಗ್ರೂಪ್ ರಚಿಸಿದ್ದು, ಇದು ನಾರಾಯಣಸ್ವಾಮಿ ಕೆಂಗಣ್ಣಿಗೆ ಗುರಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ