ಕಲ್ಲಿದ್ದಲು ಹಗರಣ:ಮಾಜಿ ಕಾರ್ಯದರ್ಶಿ ಗುಪ್ತಾ ಅಪರಾಧಿ:ವಿಶೇಷ ಕೋರ್ಟ್
Team Udayavani, May 19, 2017, 11:24 AM IST
ಹೊಸದಿಲ್ಲಿ : ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ದಿಲ್ಲಿಯ ವಿಶೇಷ ಕೋರ್ಟ್ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ ಅವರನ್ನು ಅಪರಾಧಿ ಎಂದು ಘೋಷಿಸಿದೆ.
ಇದೇ ವೇಳೆ ನ್ಯಾಯಾಲಯವು ಕಲ್ಲಿದ್ದಲು ಸಚಿವಾಲಯದ ಆಗಿನ ಜಂಟಿ ಕಾರ್ಯದರ್ಶಿ ಕೆ ಎಸ್ ಕ್ರೋಫಾ, ಆಗಿನ ನಿರ್ದೇಶಕ ಕೆ ಸಿ ಸಮಾರಿಯಾ ಮತ್ತು ಇತರ ಕೆಲವರನ್ನು ಅಪರಾಧಿಗಳೆಂದು ಪ್ರಕಟಿಸಿದೆ.
ಆದರೆ ಈ ಪ್ರಕರಣದ ಓರ್ವ ಆರೋಪಿಯಾಗಿದ್ದ ಚಾರ್ಟರ್ಡ್ ಅಕೌಂಟೆಂಟ್ ಅಮಿತ್ ಗೋಯಲ್ ಅವರನ್ನು ಖುಲಾಸೆಗೊಳಿಸಿದೆ.
ಗುಪ್ತಾ, ಕ್ರೋಫಾ ಮತ್ತು ಸಮಾರಿಯಾ ಅವರೊಂದಿಗೆ ನ್ಯಾಯಾಲಯವು ಕೆಎಸ್ಎಸ್ಪಿಎಲ್ ಕಂಪೆನಿ ಮತ್ತು ಅದರ ಆಡಳಿತ ನಿರ್ದೇಶಕ ಪವನ್ ಕುಮಾರ್ ಅಹ್ಲುವಾಲಿಯಾ ಅವರನ್ನು ಕೂಡ ಅಪರಾಧಿಗಳೆಂದು ಪ್ರಕಟಿಸಿದೆ.
ಹಗರಣ ನಡೆದಿದ್ದ ವೇಳೆ ಕ್ರೋಫಾ ಅವರು ಕಲ್ಲಿದ್ದಲು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು; ಸಮಾರಿಯಾ ಅವರು ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ನಿರ್ದೇಶಕರಾಗಿದ್ದರು.
ಕಳೆದ ವರ್ಷ ನ್ಯಾಯಾಲಯವು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವ ಸಂದರ್ಭದಲ್ಲಿ “ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗುಪ್ತಾ ಅವರು ಕತ್ತಲಲ್ಲಿ ಇಟ್ಟಿದ್ದರು; ಮೇಲ್ನೋಟಕ್ಕೇ ಅವರು ಕಾನೂನು ಉಲ್ಲಂಘನೆ ಮಾಡಿದ್ದರು ಮತ್ತು ಪ್ರಧಾನಿಯವರು ಆತನ ಮೇಲೆ (ಗುಪ್ತಾ) ಇರಿಸಿದ್ದ ವಿಶ್ವಾಸಕ್ಕೆ ಆತ ದ್ರೋಹ ಬಗೆದಿದ್ದ’ ಎಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!