ಕಲ್ಲಿದ್ದಲು ಹಗರಣ ತನಿಖೆ ವಿಳಂಬವೇಕೆ?: ಸುಪ್ರೀಂ
Team Udayavani, Aug 22, 2017, 8:30 AM IST
ಹೊಸದಿಲ್ಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖೆಯನ್ನು ಪೂರ್ಣಗೊಳಿಸದ ಸಿಬಿಐ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಗರಣದ ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಮೇಲಿಂದ ಮೇಲೆ ಎಚ್ಚರಿಸಿದ ಹೊರತಾಗಿಯೂ ನೀವು ಸುಮ್ಮನಿದ್ದೀರಿ. ಸದ್ಯ ತನಿಖೆ ಯಾವ ಹಂತದಲ್ಲಿದೆ ಎಂದು ಕೋರ್ಟ್ಗೆ ತಿಳಿಯಬೇಕಿದೆ. ಅದ್ದರಿಂದ ಪ್ರಕರಣದ ತನಿಖೆಯ ಪ್ರಗತಿ ಕುರಿತು ಸಿಬಿಐ ವರದಿ ಸಲ್ಲಿಸಬೇಕು ಎಂದು ನ್ಯಾ| ಮದನ್ ಬಿ ಲೋಕೂರ್ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅ.9ಕ್ಕೆಮುಂದೂಡಿದೆ.