ಗಂಗಾಸಾಗರ ಮೇಳ: ಪ.ಬಂಗಾಲ ಕರಾವಳಿಗೆ ತಟ ರಕ್ಷಣ ಪಡೆಯ ಬಿಗಿ ಭದ್ರತೆ
Team Udayavani, Jan 12, 2019, 10:34 AM IST
ಕೋಲ್ಕತ : ಪಾಕ್ ಉಗ್ರರು ಭಾರತದ ಕರಾವಳಿಯಲ್ಲಿ ಸಮುಂದರೀ ಜಿಹಾದ್ ನಡೆಸುವರೆಂಬ ಗುಪ್ತಚರ ದಳದ ಮಾಹಿತಿಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲ ಕರಾವಳಿಯಲ್ಲಿ ಈಗಿನ್ನು ನಡೆಯಲಿರುವ ಗಂಗಾಸಾಗರ ಮೇಳಕ್ಕೆ ಭಾರತೀಯ ತಟ ರಕ್ಷಣ ಪಡೆ ತನ್ನ ಕಣ್ಗಾವಲನ್ನು ತೀವ್ರಗೊಳಿಸಿದೆ ಎಂದು ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಮಕರ ಸಂಕ್ರಾತಿಯ ಪರ್ವ ಸಂದರ್ಭದಲ್ಲಿ ಹೂಗ್ಲಿ ನದಿ ಮತ್ತು ಬಂಗಾಲ ಕೊಲ್ಲಿ ಸಂಗಮಿಸುವಲ್ಲಿನ ಸಾಗರ ದ್ವೀಪದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲು ದೇಶಾದ್ಯಂತದಿಂದ ಲಕ್ಷಾಂತರ ಶ್ರದ್ಧಾಳುಗಳು ಇಲ್ಲಿಗೆ ಬರುತ್ತಾರೆ.
ಪಶ್ಚಿಮ ಬಂಗಾಲ ಕರಾವಳಿಗೆ ಪೂರ್ಣ ಭದ್ರತೆ ನೀಡುವ ನಿಟ್ಟಿನಲ್ಲಿ ಭಾರತೀಯ ತಟ ರಕ್ಷಣ ಪಡೆ (ಐಸಿಜಿ) ಹೋವರ್ ಕ್ರಾಫ್ಟ್, ಅತ್ಯಧಿಕ ವೇಗದ ಕಾವಲು ಬೋಟುಗಳು ಮತ್ತು ಇಂಟರ್ ಸೆಪ್ಟರ್ ಬೋಟುಗಳನ್ನು ಕರ್ತವ್ಯಕ್ಕೆ ನಿಯೋಜಿಸಿದೆ ಎಂದು ಅಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ