ಬೆಳಗ್ಗೆ ಮನೆಗೆ ಬನ್ನಿ ಎಂದಿದ್ದ ಸುಷ್ಮಾ: ಸಾಳ್ವೆ ದುಃಖ
Team Udayavani, Aug 7, 2019, 5:14 AM IST
ನೀವು ಭಾರತಕ್ಕಾಗಿ ಪ್ರಕರಣ ಗೆದ್ದಿದ್ದೀರಿ. ಅದಕ್ಕಾಗಿ ಶುಲ್ಕ ಪಾವತಿ ಮಾಡಬೇಕಾಗಿದೆ. ಬುಧವಾರ ಬೆಳಗ್ಗೆ 6 ಗಂಟೆಗೆ ಬನ್ನಿ ಎಂದಿದ್ದರು ಸುಷ್ಮಾ.
ನಿಮ್ಮನ್ನು ನಾನು ಭೇಟಿಯಾಗಬೇಕು. ಕುಲಭೂಷಣ ಜಾಧವ್ ಪ್ರಕರಣವನ್ನು ಗೆದ್ದಿದ್ದೀರಿ. ಅದಕ್ಕಾಗಿ 1 ರೂ. ಶುಲ್ಕ ಪಾವತಿ ಮಾಡಬೇಕಿದೆ. ಅದಕ್ಕಾಗಿ ಬುಧವಾರ ಬೆಳಗ್ಗೆ ಬನ್ನಿ ಎಂದು ಹೇಳಿದ್ದರು ಈಗ ಅವರೇ ಇಲ್ಲ ಎಂದು ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಶೋಕ ವ್ಯಕ್ತಪಡಿಸಿದ್ದಾರೆ. ವಿಯೆನ್ನಾದಲ್ಲಿ ಜಾಧವ್ ವಿರುದ್ಧದ ಪ್ರಕರಣದಲ್ಲಿ ಭಾರತದ ಪರವಾಗಿ ವಾದ ಮಂಡಿಸಿ ಗೆದ್ದಿದ್ದಾಗ ತಮಗೆ ಅಭಿನಂದನೆ ಸಲ್ಲಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಇದೀಗ ಅವರೇ ಇಲ್ಲವಾಗಿದ್ದಾರೆ ಎಂದು ದುಃಖೀಸಿದ್ದಾರೆ. ಜತೆಗೆ ಟ್ವೀಟ್ ಮಾಡಿ ತಮಗೆ ಧನ್ಯವಾದ ಸಮರ್ಪಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಮಂಗಳವಾರ ರಾತ್ರಿ 8.50ಕ್ಕೆ ಅವರ ಜತೆಗೆ ಫೋನ್ನಲ್ಲಿ ಮಾತನಾಡಿದ್ದೆ. ಸುಷ್ಮಾರ ಜತೆಗಿನ ಸಂಭಾಷಣೆ ಆತ್ಮೀಯವಾಗಿತ್ತು .ನೀವು ಭಾರತಕ್ಕಾಗಿ ಪ್ರಕರಣ ಗೆದ್ದಿದ್ದೀರಿ. ಅದಕ್ಕಾಗಿ ಅತ್ಯುಕೃಷ್ಟವಾದ ಶುಲ್ಕ ಪಾವತಿ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಬುಧವಾರ ಬೆಳಗ್ಗೆ 6 ಗಂಟೆಗೆ ಬರುವಂತೆ ತಮಗೆ ಸೂಚಿಸಿದ್ದರು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು