ರಾಜಾಗೆ ಆಯೋಗ ನೋಟಿಸ್
Team Udayavani, Apr 1, 2021, 6:44 AM IST
ಚೆನ್ನೈ: ತಮಿಳುನಾಡಿನ ಸಿಎಂ ಪಳನಿಸ್ವಾಮಿ ಅವರ ಜನನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಡಿಎಂಕೆ ಮುಖಂಡ ಎ. ರಾಜಾಗೆ ಚುನಾವಣ ಆಯೋಗ ನೋಟಿಸ್ ನೀಡಿದೆ. ಭಾಷಣದ ಮಾತುಗಳು ಅವಹೇಳನಕಾರಿ ಮಾತ್ರವಲ್ಲದೆ, ಮಹಿಳೆಯರ ಘನತೆಗೆ ಧಕ್ಕೆ ತರುವಂತಿವೆ. ಅಲ್ಲದೆ ಅಶ್ಲೀಲತೆಯಿಂದ ಕೂಡಿವೆ. ಇದು ನೀತಿ ಸಂಹಿತೆಯ ಗಂಭೀರ ಉಲ್ಲಂಘನೆ. ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಎಂದು ಆಯೋಗ ಸೂಚಿಸಿದೆ.
ರಾಜನಾಥ್ ಗರಂ: ಊಟಿಯಲ್ಲಿ ಪ್ರಚಾರ ಕೈಗೊಂಡಿದ್ದ ರಕ್ಷಣ ಸಚಿವ ರಾಜನಾಥ್ ಸಿಂಗ್, “ರಾಜಾ ಅವರ ಹೇಳಿಕೆ ನಾಚಿಕೆಗೇಡು. ತಮಿಳುನಾಡು ಮಾತ್ರವಲ್ಲದೆ, ಇಡೀ ದೇಶದ ಸೋದರಿಯರು ಮತ್ತು ತಾಯಂದಿರಿಗೆ ಡಿಎಂಕೆ ಈ ಮೂಲಕ ಅಪಮಾನ ಮಾಡಿದೆ’ ಎಂದು ಆರೋಪಿಸಿದ್ದಾರೆ.
ಇವಿಎಂ ತಿರುಚುವುದು ಅಸಾಧ್ಯ: ಆಯೋಗ :
ವಿದ್ಯುನ್ಮಾನ ಮತಯಂತ್ರ (ಇವಿಎಂ) ತಿರುಚುವುದು ಅಸಾಧ್ಯ ಎಂದು ಚುನಾವಣ ಆಯೋಗ ಮದ್ರಾಸ್ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ. “ವೈಫೈ ಅಥವಾ ಯಾವುದೇ ಡಿವೈಸ್ಗಳಿಂದ ಇವಿಎಂ ತಿರುಚಲಾಗದು’ ಎಂದು ಹೇಳಿದೆ. ಡಿಎಂಕೆಯ ಆರ್.ಎಸ್. ಭಾರತಿ “ಎಲ್ಲ ಮತಗಟ್ಟೆಗಳಲ್ಲಿನ ಮತಪ್ರಕ್ರಿಯೆಯನ್ನು ಸಿಸಿಟಿವಿ ಮೂಲಕ ನೇರಪ್ರಸಾರಗೊಳಿಸಬೇಕು’ ಎಂದು ಆಗ್ರಹಿಸಿ, ಹೈಕೋರ್ಟ್ನ ಮೆಟ್ಟಿಲೇರಿದ್ದರು. “ಎಲ್ಲ ಕೇಂದ್ರಗಳಲ್ಲೂ ಇದು ಅಸಾಧ್ಯ. ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲ್ಪಟ್ಟ 44 ಸಾವಿರ ಮತಕೇಂದ್ರಗಳಿಗೆ ಸಿಸಿಟಿವಿ ಕವರೇಜ್ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದೆ.