ಸೇನಾ ವ್ಯವಹಾರಗಳ ಪರಾಮರ್ಶೆಗೆ ಸಮಿತಿ
Team Udayavani, Aug 18, 2019, 5:45 AM IST
ಹೊಸದಿಲ್ಲಿ: ರಕ್ಷಣಾ ಇಲಾಖೆಯ ಶಸ್ತ್ರಾಸ್ತ್ರ ಖರೀದಿ ವ್ಯವಹಾರಗಳ (ಡಿಪಿಪಿ) ಪರಾಮರ್ಶೆಗಾಗಿ ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸುವ ಪ್ರಸ್ತಾವನೆಗೆ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ. ಶಸ್ತ್ರಾಸ್ತ್ರ ಪೂರೈಕೆಗಳಲ್ಲಿ ಆಗುವ ವಿಳಂಬ ತಪ್ಪಿಸಿ, ಪ್ರಧಾನಿ ಮೋದಿ ಆಶಯದ “ಮೇಕ್ ಇನ್ ಇಂಡಿಯಾ’ ಅಡಿ ಸೇನೆಯನ್ನು ಶಕ್ತಿಶಾಲಿಗೊಳಿಸುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ.
ಈ ಸಮಿತಿಗೆ ಮಹಾ ನಿರ್ದೇಶಕರೊಬ್ಬರ (ಡಿಜಿ) ಅಧ್ಯಕ್ಷತೆ ಇರಲಿದ್ದು, ಅವರ ಅಧೀನದಲ್ಲಿ ಜಂಟಿ ಕಾರ್ಯದರ್ಶಿ ಅಥವಾ ಸೇನೆಯ ಮೇಜರ್ ಜನರಲ್ ಹುದ್ದೆಗಳಿಗೆ ಸರಿಸಮಾನವೆನಿಸುವ 11 ಅಧಿಕಾರಿಗಳು ಸದಸ್ಯರಾಗಿ ಇರಲಿದ್ದಾರೆ.
ಅದಲ್ಲದೆ, ಡಿಪಿಪಿಗಳ ಪರಾಮರ್ಶೆ ಮಾತ್ರ ವಲ್ಲದೆ, ಸೇನೆಯ ಪುನಶ್ಚೇತನಕ್ಕೆ ಹೊಸ ಪರಿ ಕಲ್ಪನೆಗಳ ಪರಾಮರ್ಶೆ ಮತ್ತು ಅನುಷ್ಠಾನ, ಸಾಮಾನು- ಸರಂಜಾಮು ಸಾಗಣೆಯ ಮೇಲು ಸ್ತುವಾರಿ, ಸೇನೆಯೊಳಗಿನ ಸುವ್ಯವಸ್ಥೆ ಹಾಗೂ ಸುರಕ್ಷತೆಯ ವಾತಾವರಣ, ಸೇನೆಯ ಸ್ಥಿರಾಸ್ತಿ ವ್ಯವಹಾರಗಳ ಮೇಲುಸ್ತುವಾರಿ, ಸೇನೆಯ ಗುಣಮಟ್ಟ ಹೆಚ್ಚಳ, ಹೊಸ ಸಾರ್ಟಪ್ಗ್ ಳನ್ನು ಸೇನೆಯ ಅವಶ್ಯಕ ಪರಿಕರ, ತಂತ್ರಜ್ಞಾನಗಳ ಅಭಿವೃದ್ಧಿಗೆ ಪ್ರೇರೇಪಿಸುವ ಜವಾಬ್ದಾರಿಯನ್ನು ಹೊಂದಿದೆ.
2009 ಹಾಗೂ 2016ರಲ್ಲಿ ಅನು ಷ್ಠಾನಕ್ಕೆ ಬಂದಿದ್ದ ಡಿಪಿಪಿಗಳ ಪುನರ್ ಪರಿಶೀಲನೆ ಕೆಲಸ, ಹೊಸ ಸಮಿತಿಯ ಮೊದಲ ಕೆಲಸವಾಗಲಿದೆ.
ಒಎಫ್ಬಿ ಖಾಸಗೀಕರಣ ಇಲ್ಲ: ಕೇಂದ್ರ
ಭಾರತೀಯ ಸೇನೆಗೆ ಶಸ್ತ್ರಾಸ್ತ್ರವನ್ನು ತಯಾರಿಸಿ ಪೂರೈಸುವ, ಆರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ಬಿ) ಅನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವನೆ ಕೇಂದ್ರದ ಮುಂದಿಲ್ಲ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಖಾಸಗೀಕರಣವು ಕೇವಲ ವದಂತಿಯಷ್ಟೇ ಎಂದಿರುವ ಇಲಾಖೆ, ಒಎಫ್ಬಿಯ ಕಾರ್ಯಕ್ಷಮತೆ ಹೆಚ್ಚಿಸಲು ರಕ್ಷಣಾ ಇಲಾಖೆಯ ಅಧಿಕಾರಿಗಳು, ಒಎಫ್ಬಿ ಕಾರ್ಮಿಕ ಸಂಘಟನೆಗಳ ಮುಖಂಡರ ನಡುವೆ ನಿರಂತರ ಮಾತುಕತೆ ಸಾಗಿದೆ.
ಸಕಾರಾತ್ಮಕ ಹೆಜ್ಜೆಗಳಿಂದ ಒಎಫ್ಬಿಯನ್ನು ಬಲಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಒಎಫ್ಬಿಯಲ್ಲಿ ಪ್ರಸ್ತುತ 1 ಲಕ್ಷಕ್ಕೂ ಅಧಿಕ ಸಿಬ್ಬಂದಿಯಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
MUST WATCH
ಹೊಸ ಸೇರ್ಪಡೆ
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ