ವಾದ್ರಾಗೆ ಷರತ್ತುಬದ್ಧ ಮಧ್ಯಂತರ ಜಾಮೀನು
Team Udayavani, Feb 3, 2019, 1:08 AM IST
ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧನ ಭೀತಿ ಎದುರಿಸುತ್ತಿದ್ದ ರಾಬರ್ಟ್ ವಾದ್ರಾ ಅವರಿಗೆ ದೆಹಲಿಯ ಕೋರ್ಟ್ ಶನಿವಾರ ಮಧ್ಯಂತರ ಜಾಮೀನು ನೀಡಿದೆ. ಫೆ.16ರವರೆಗೆ ಜಾಮೀನು ಮಂಜೂರು ಮಾಡಲಾಗಿದ್ದು, ಫೆ.6ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕು ಮತ್ತು ತನಿಖೆಯಲ್ಲಿ ಸಹ ಕರಿಸಬೇಕು ಎಂಬ ಷರತ್ತನ್ನೂ ಹಾಕಲಾಗಿದೆ.
ಲಂಡನ್ನ ಬ್ರ್ಯಾನ್ಸ್ಟನ್ ಸ್ಕ್ವೇರ್ ನಲ್ಲಿರುವಂಥ 1.9 ದಶಲಕ್ಷ ಪೌಂಡ್ ಮೌಲ್ಯದ ಆಸ್ತಿಯ ಖರೀದಿ ವೇಳೆ ಹಣಕಾಸು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ವಾದ್ರಾ ಮೇಲಿದೆ. ಶನಿವಾರ ವಿಚಾರಣೆ ವೇಳೆ ಹಾಜರಾಗಿದ್ದ ಇ.ಡಿ. ಪರ ವಕೀಲರಾದ ನಿತೇಶ್ ರಾಣಾ, ‘ವಾದ್ರಾ ಅವರು ಲಂಡನ್ನಲ್ಲಿ ಹಲವು ಆಸ್ತಿಪಾಸ್ತಿಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಎರಡು ಮನೆಗಳು, 6 ಫ್ಲ್ಯಾಟ್ಗಳು ಸೇರಿದಂತೆ ಹಲವು ಆಸ್ತಿಯನ್ನು ಅವರು ಹೊಂದಿದ್ದಾರೆ. ವಾದ್ರಾ ಅವರು ನಮ್ಮ ಮುಂದೆ ಬಂದು ಅವುಗಳ ವಿವರ ನೀಡಬೇಕು. ಜತೆಗೆ, 2009ರ ಪೆಟ್ರೋಲಿಯಂ ಡೀಲ್ನಲ್ಲಿಯೂ ವಾದ್ರಾ ಕಿಕ್ಬ್ಯಾಕ್ ಪಡೆದಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ನೀಡಬಾರದು’ ಎಂದು ವಾದಿಸಿದರು.
ವಾದ್ರಾ ಪರ ವಾದಿಸಿದ ವಕೀಲ ಕೆಟಿಎಸ್ ತುಳಸಿ, ನನ್ನ ಕಕ್ಷಿದಾರ ತಮ್ಮ ತಾಯಿಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರು ಖಂಡಿತಾ ವಾಪಸ್ ಬಂದು, ತನಿಖೆಯಲ್ಲಿ ಸಹಕರಿಸುತ್ತಾರೆ. ಹಾಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ