ಗೋವಾ ಪರಿಸ್ಥಿತಿ ನಿಭಾಯಿಸಲು ಚೆಲ್ಲಕುಮಾರ್ ರವಾನಿಸಿದ ಕಾಂಗ್ರೆಸ್ ಹೈಕಮಾಂಡ್
Team Udayavani, Jul 11, 2019, 12:33 PM IST
ಪಣಜಿ : ಗೋವೆಯ ತನ್ನ ಹತ್ತು ಶಾಸಕರು ಬಿಜೆಪಿಗೆ ಸೇರಿರುವ ವಿದ್ಯಮಾನದಿಂದ ತೀವ್ರ ಆಘಾತಕ್ಕೆ ಗುರಿಯಾಗಿರುವ ಕಾಂಗ್ರೆಸ್, ಅಲ್ಲಿನ ಸ್ಥಿತಿಗತಿಯನ್ನು ನಿಭಾಯಿಸುವ ಸಲುವಾಗಿ ಹಿರಿಯ ನಾಯಕ ಎ ಚೆಲ್ಲಕುಮಾರ್ ಅವರನ್ನು ಗೋವೆಗೆ ಕಳುಹಿಸಿದೆ.
ಚೆಲ್ಲಕುಮಾರ್ ಅವರು ಎಐಸಿಸಿ ಕಾರ್ಯದರ್ಶಿಯಾಗಿದ್ದು ವಿರೋಧ ಪಕ್ಷದ ಗೋವಾ ಪ್ರಭಾರಿಯಾಗಿದ್ದಾರೆ. ನಿನ್ನೆ ಬುದವಾರ ರಾತ್ರಿಯೇ ಅವರು ಇಲ್ಲಿಗೆ ಆಗಮಿಸಿ ಪಕ್ಷದ ಉಳಿದ ಐವರು ಶಾಸಕರೊಂದಿಗೆ ಮುಂದಿನ ಕಾರ್ಯ ತಂತ್ರವನ್ನು ಚರ್ಚಿಸಿದ್ದಾರೆ.
ಪಕ್ಷದ ಹೈಕಮಾಂಡ್ ಜತೆಗೆ ಸಮಾಲೋಚಿಸಿ ಇಂದು ಗುರವಾರ ಎಲ್ಲ ಐವರು ಶಾಸಕರು ಸಭೆ ಸೇರಿ ತಮ್ಮ ನಾಯಕನನ್ನು ಆರಿಸಲಿದ್ದಾರೆ ಎಂದು ಚಲ್ಲಕುಮಾರ್ ಹೇಳಿದರು. ನಿನ್ನೆ ಬುಧವಾರ ಗೋವೆಯಲ್ಲಿ ನಡೆದ ರಾಜಕೀಯ ವಿದ್ಯಮಾನ ಪ್ರಜಾಸತ್ತೆಯ ಕಗ್ಗೊಲೆಯಾಗಿದೆ ಎಂದವರು ಖಂಡಿಸಿದರು.