ರಾಜಸ್ಥಾನದ ಬೈ ಎಲೆಕ್ಷನ್ನಲ್ಲಿ ಕೈ ಅಭ್ಯರ್ಥಿ ಗೆಲುವು
Team Udayavani, Feb 1, 2019, 12:30 AM IST
ಹೊಸದಿಲ್ಲಿ: ರಾಜಸ್ಥಾನದ ರಾಮಗಢ ಮತ್ತು ಹರ್ಯಾಣದ ಜಿಂದ್ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳು ಜಯ ಸಾಧಿಸಿವೆ. ರಾಮಗಢದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಫಿ ಯಾಜು ಬೇರ್ ಭಾರೀ ಮತಗಳ ಅಂತರ ದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದು, ರಾಜಸ್ಥಾನದಲ್ಲಿ ಸರಳ ಬಹುಮತದತ್ತ ಹೊರಳುವಲ್ಲಿ ಕಾಂಗ್ರೆಸ್ ಸಫಲವಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 200 ಅಸೆಂಬ್ಲಿ ಕ್ಷೇತ್ರಗಳ ಪೈಕಿ 99ರಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು. ಹೀಗಾಗಿ, ಸರಳ ಬಹುಮತಕ್ಕೆ ಕೇವಲ 1 ಸೀಟಿನ ಕೊರತೆ ಬಿದ್ದಿತ್ತು. ಇದೀಗ ರಾಮಗಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವ ಕಾರಣ, ಕಾಂಗ್ರೆಸ್ನ ಸಂಖ್ಯಾಬಲ 100ಕ್ಕೇರಿಕೆಯಾಗಿದೆ. ಇದು ಆಡಳಿತಾರೂಢ ಹಸ್ತಪಕ್ಷಕ್ಕೆ ನೆಮ್ಮದಿ ತಂದಿದೆ. ಡಿ. 7ರ ಚುನಾವಣೆಗೂ ಮುನ್ನ ಬಿಎಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ಅವರು ನಿಧನರಾದ ಕಾರಣ, ಇಲ್ಲಿನ ಚುನಾವಣೆಯನ್ನು ಮುಂದೂಡ ಲಾಗಿತ್ತು. ಇಲ್ಲಿ ಬಿಜೆಪಿಯು ಸುಖವಂತ್ ಸಿಂಗ್ರನ್ನು ಕಣಕ್ಕಿಳಿಸಿತ್ತು. ಅವರು 12 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದಾರೆ.
ಜಿಂದ್ ಬಿಜೆಪಿಗೆ
ಇನ್ನು ಹರ್ಯಾಣದ ಜಿಂದ್ನಲ್ಲಿ ಬಿಜೆಪಿಯ ಕೃಷನ್ ಮಿಧಾ ಅವರು ಪ್ರತಿಸ್ಪರ್ಧಿ ಜೆಜೆಪಿ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಚೌಟಾಲಾ ಅವರನ್ನು 12,935 ಮತಗಳ ಅಂತರದಿಂದ ಸೋಲಿಸಿ, ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಹಿರಿಯ ನಾಯಕ ರಣದೀಪ್ ಸಿಂಗ್ ಸುಜೇìವಾಲಾ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಐಎನ್ಎಲ್ಡಿಯಿಂದ ಪ್ರತ್ಯೇಕವಾಗಿ ಹೊಸದಾಗಿ ರಚನೆಯಾಗಿದ್ದ ಜನನಾಯಕ್ ಜನತಾ ಪಾರ್ಟಿ(ಜೆಜೆಪಿ) ಎರಡನೇ ಸ್ಥಾನ ಗಳಿಸಿದರೆ, ಐಎನ್ಎಲ್ಡಿ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ