ನವಜೋತ್ ಹೇಳಿಕೆ: 2 ವಾರಗಳ ಬಳಿಕ ದೂರ ಸರಿದ ಕಾಂಗ್ರೆಸ್
Team Udayavani, Feb 28, 2019, 1:49 PM IST
ಹೊಸದಿಲ್ಲಿ : 40 ಭಾರತೀಯ ಯೋಧರನ್ನು ಬಲಿಪಡೆದಿದ್ದ ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನವನ್ನು ದೂರಲಾಗದು ಎಂಬ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನೀಡಿದ ಎರಡು ವಾರಗಳ ತರುವಾಯ ಕಾಂಗ್ರೆಸ್ ಪಕ್ಷ , ಸಿಧು ಹೇಳಿಕೆಯಿಂದ ದೂರ ಸರಿದಿದೆ.
‘ಸಿಧು ಹೇಳಿಕೆ ಅವರ ವೈಯಕ್ತಿ ಅಭಿಪ್ರಾಯವಾಗಿದ್ದು ಅದು ಪಕ್ಷದ ನಿಲುವನ್ನು ಸೂಚಿಸುವುದಿಲ್ಲ’ ಎಂದು ಹೇಳುವ ಮೂಲಕ ಕಾಂಗ್ರೆಸ್ ತನ್ನ ಮುಖವನ್ನು ಉಳಿಸಿಕೊಳ್ಳಲು ಯತ್ನಿಸಿದೆ.
ಭಾರತ ವಿರೋಧಿ ಅಜೆಂಡಾ ಹೊಂದಿರುವ ಹಲವಾರು ಉಗ್ರ ಸಂಘಟನೆಗಳಿಗೆ ಆಸರೆ ನೀಡಿರುವ ‘ಪಾಕ್ ಜತೆ ಭಾರತ ಶಾಂತಿ ಮಾತುಕತೆ ನಡೆಸಬೇಕು’ ಎಂದು ಸಿಧು ಆಗ್ರಹಿಸಿದ್ದರು.
ಪುಲ್ವಾಮಾ ಉಗ್ರ ದಾಳಿಗೆ ತಾನೇ ಹೊಣೆ ಎಂದು ಪಾಕ್ ಮೂಲದ ಜೆಇಎಂ ಉಗ್ರ ಸಂಘಟನೆ ಹೇಳಿಕೊಂಡ ಹೊರತಾಗಿಯೂ ಈ ಕೃತ್ಯಕ್ಕೆ ಪಾಕಿಸ್ಥಾನವನ್ನು ದೂರಲಾಗದು ಎಂದು ಹೇಳಿಕೆ ನೀಡಿದ ಸಿಧು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ