5 ಸಾವಿರ ಕೋಟಿ ರೂ. ಅಕ್ರಮ: ಅಹ್ಮದ್ ಪಟೇಲ್ ಅಳಿಯನ ಮೇಲೆ ಆರೋಪ
Team Udayavani, Jun 3, 2018, 6:00 AM IST
ಅಹಮದಾಬಾದ್: 5 ಸಾವಿರ ಕೋಟಿ ರೂ.ಅಕ್ರಮ ಎಸಗಿರುವ ಗುಜರಾತ್ ಮೂಲದ ಸ್ಟೆರ್ಲಿಂಗ್ ಬಯೋಟೆಕ್ ಗ್ರೂಪ್ ಮಾಲೀಕರಿಂದ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅಳಿಯ ಇರ್ಫಾನ್ ಸಿದ್ದಿಕಿ ಲಂಚ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ.) ತನ್ನ ವರದಿಯಲ್ಲಿ ಉಲ್ಲೇಖೀಸಿದೆ.
ಮಾಲೀಕ ಚೇತನ್ ಜಯಂತಿಲಾಲ್ ಸಂದೇಸರ ಹಲವು ಬಾರಿ ಸಿದ್ದಿಕಿ ಮನೆಗೆ ಭೇಟಿ ನೀಡಿದ್ದ. ಕೆಲವು ಬಾರಿ ಮಧ್ಯರಾತ್ರಿ ಕೂಡ ಭೇಟಿ ನೀಡಿ ಲಂಚ ನೀಡಿದ್ದ ಎಂದು ಇ.ಡಿ. ಹೇಳಿದೆ. ಅಷ್ಟೇ ಅಲ್ಲ, ಅಹ್ಮದ್ ಪಟೇಲ್ ಆಪ್ತ ಹಾಗೂ ದೆಹಲಿ ನಿವಾಸಿ ಗಗನ್ ಧವನ್ನನ್ನೂ ಜಾರಿ ನಿರ್ದೇಶನಾಲಯ ಇದೇ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡಿದ್ದು, ಇದು ಕಾಂಗ್ರೆಸ್ನ ಮತ್ತೂಂದು ದೊಡ್ಡ ಹಗರಣ. ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಶುಕ್ರವಾರವಷ್ಟೇ ಸಂಸ್ಥೆಗೆ ಸಂಬಂಧಿ ಸಿದ 4700 ಕೋಟಿ ರೂ, ಮೌಲ್ಯದ ಸ್ವತ್ತು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಪೈಕಿ ಸುಮಾರು 4 ಸಾವಿರ ಎಕರೆ, ಯಂತ್ರೋಪಕರಣಗಳು, ವಿವಿಧ ಕಂಪನಿಗಳು ಸುಮಾರು 200 ಬ್ಯಾಂಕ್ ಖಾತೆಗಳು, 6.67 ಕೋಟಿ ರೂ. ಮೌಲ್ಯದ ಷೇರುಗಳು ಹಾಗೂ ವಿವಿಧ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ