ಸೇನೆ ವಿರುದ್ಧ ದೇಶದ್ರೋಹದ ಹೇಳಿಕೆ: ಆಜಾದ್, ಸೋಜ್ ವಿರುದ್ಧ ಕೇಸು
Team Udayavani, Jun 29, 2018, 3:39 PM IST
ಹೊಸದಿಲ್ಲಿ : ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮತ್ತು ಸೈಫುದ್ದೀನ್ ಸೋಜ್ ಸೇನೆಯನ್ನು ಅವಮಾನಿಸುವ ಹೇಳಿಕೆ ನೀಡಿರುವರೆಂಬ ಕಾರಣಕ್ಕೆ ಅವರ ವಿರುದ್ಧ ವಿರುದ್ಧ ದೇಶದ್ರೋಹದ ದೂರನ್ನು ದಾಖಲಿಸಲಾಗಿದೆ.
ವಕೀಲ ಶಶಿ ಭೂಷಣ್ ಅವರು ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಈ ದೂರನ್ನು ದಾಖಲಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಈಚೆಗೆ “ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಗೆ ಉಗ್ರರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಪೌರರು ಬಲಿಯಾಗಿದ್ದಾರೆ’ ಎಂದು ಹೇಳಿದ್ದರು.
ಸೇನೆಯ ವಿರುದ್ಧದ ಈ ಅವಮಾನಕಾರಿ ಹೇಳಿಕೆಗಾಗಿ ಆಜಾದ್ ವಿರುದ್ಧ ಐಪಿಸಿ ಸೆ.124, 120ಬಿ ಮತುತ 505(1) ರ ಪ್ರಕಾರ ತೆಗೆದುಕೊಳ್ಳಬೇಕೆಂದು ಭಷಣ್ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಸೇನೆಯು ಅಮಾಯಕರ ಕೊಲೆಗಡುಕನೆಂದು ಆರೋಪಿಸಿಸುವುದು ದೇಶದ ವಿರುದ್ಧ ಯುದ್ಧ ಸಾರುವುದಕ್ಕೆ ಕಡಿಮೆ ಎನಿಸದ ಕೃತ್ಯವಾಗಿದೆ ಎಂದು ವಕೀಲ ಭೂಷಣ್ ಅವರು ದೂರಿನಲ್ಲಿ ಹೇಳಿದ್ದಾರೆ.
ಭೂಷಣ್ ಅವರು ದಾಖಲಿಸಿರುವ ಈ ದೂರು ನಾಳೆ ಶನಿವಾರ ಮ್ಯಾಜಿಸ್ಟೀರಿಯಲ್ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.
ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಅವರು ಕಳೆದ ವಾರ “ಕಾಶ್ಮೀರದಲ್ಲಿ ಆಜಾದಿ ಅಸಾಧ್ಯ; ಎಲ್ಲ ಹಿತಾಸಕ್ತಿದಾರರು ಒಟ್ಟಿಗೇ ಕುಳಿತು ಸಂವಾದ, ಮಾತುಕತೆ ನಡೆಸುವುದರಲ್ಲೇ ಕಾಶ್ಮೀರ ವಿವಾದಕ್ಕೆ ಪರಿಹಾರವಿದೆ’ ಎಂದು ಹೇಳಿದ್ದರು.
ಸೋಜ್ ಅವರು ತಮ್ಮ ಈಚೆಗೆ ಬಿಡುಗಡೆಯಾದ ಪುಸ್ತಕದಲ್ಲಿ “ಕಾಶ್ಮೀರಿಗಳಿಗೆ ಆಯ್ಕೆಯ ಅವಕಾಶ ಕೊಟ್ಟರೆ ಅವರು ಬಯಸುವುದು ಸಂಪೂರ್ಣ ಸ್ವಾತಂತ್ರ್ಯವನ್ನೇ ಎಂದು ಪಾಕ್ ಸರ್ವಾಧಿಕಾರಿ ಪರ್ವೆಜ್ ಮುಶರಫ್ ಹೇಳಿರುವುದು ಸರಿಯೇ ಆಗಿದೆ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!