ಕೇರಳ ವಿಧಾನಸಭೆಗೆ ಗ್ರೆನೇಡ್ ತಂದ ಶಾಸಕ
Team Udayavani, Mar 9, 2018, 7:30 AM IST
ತಿರುವನಂತಪುರಂ: ಕೇರಳ ವಿಧಾನಸಭೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ತಿರುವಾಂಕೂರು ರಾಧಾಕೃಷ್ಣನ್ ಗ್ರೆನೇಡ್ ಪ್ರದರ್ಶಿಸಿದ್ದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯರ್ತರ ವಿರುದ್ಧ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಚರ್ಚೆಯ ವೇಳೆ ಕವರ್ನಲ್ಲಿ ಸುತ್ತಿರುವ ಗ್ರೆನೇಡ್ಅನ್ನು ಕಿಸೆಯಿಂದ ತೆಗೆದ ರಾಧಾಕೃಷ್ಣನ್, ಪೊಲೀಸರ ಕ್ರಮವನ್ನು ಖಂಡಿಸಿದರು. ಅಲ್ಲದೆ ಇದು ಅವಧಿ ಮೀರಿದ ಗ್ರೆನೇಡ್. ಪೊಲೀಸರು ಯುವ ಕಾಂಗ್ರೆಸ್ ಪ್ರತಿಭಟನಾಕಾರರನ್ನು ಚದುರಿಸಲು ಅದನ್ನು ಬಳಸುತ್ತಿದ್ದಾರೆ ಎಂದು ದೂರಿದರು. ಈ ವೇಳೆ ಶಸ್ತ್ರಾಸ್ತ್ರವನ್ನು ವಿಧಾನಸಭೆಗೆ ತರುವುದು ಕಾನೂನು ಬಾಹಿರ ಎಂದು ಆಡಳಿತ ಪಕ್ಷದ ಶಾಸಕರು ಆಕ್ಷೇಪಿಸಿದರು.