ರೈತರ ಹಿಂಸಾತ್ಮಕ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ? Watch video
Team Udayavani, Jun 8, 2017, 4:33 PM IST
ಇಂದೋರ್ : ಮಧ್ಯಪ್ರದೇಶದಲ್ಲಿ ಪೊಲೀಸ್ ಫೈರಿಂಗ್ಗೆ ಐವರು ರೈತರು ಬಲಿಯಾದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈಗ ವಾಕ್ಸಮರವೇ ನಡೆಯುತ್ತಿದೆ. ಈ ನಡುವೆ ವಿವಾದಾತ್ಮಕ ವಿಡಿಯೋ ಚಿತ್ರಿಕೆಯೊಂದು ಬಹಿರಂಗವಾಗಿದೆ. ಇದರಲ್ಲಿ ಇಂದೋರ್ನ ಕಾಂಗ್ರೆಸ್ ಶಾಸಕ ಜೀತೂ ಪಟ್ವಾರಿ ಅವರು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸಂದೀಪ್ ಸೋನಿ ಅವರ ಜತೆಗೆ ಮಾತಿನ ಜಟಾಪಟಿಯಲ್ಲಿ ನಿರತರಾಗಿರುವುದು ಕಂಡುಬರುತ್ತದೆ.
ವಿಡಿಯೋದಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸೋನಿ ಅವರು ಕೈ ಶಾಸಕ ಪಟ್ವಾರಿಗೆ ಸಿಟ್ಟಿನ ಆವೇಶದಲ್ಲಿ , “ನೀವು ನನಗೆ ಶಾಂತಿಯುತ ಪ್ರತಿಭಟನೆಯ ಭರವಸೆ ನೀಡಿದ್ದೀರಿ; ಆದರೆ ಈಗೇನಾಗಿದೆ? ಈಗ ಭುಗಿಲೆದ್ದಿರುವ ಹಿಂಸೆಗೆ ಯಾರು ಜವಾಬ್ದಾರಿ ವಹಿಸುತ್ತಾರೆ?’ ಎಂದು ಹೇಳುತ್ತಿರುವುದು ಕಂಡು ಬರುತ್ತದೆ.
ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗುವಂತೆ ಮಾಡುವಲ್ಲಿ ಕಾಂಗ್ರೆಸ್ನ ಕೈವಾಡ ಇರುವುದನ್ನು ಮ್ಯಾಜಿಸ್ಟ್ರೇಟ್ ಶಂಕಿಸಿರುವುದು ಈ ವಿಡಿಯೋದಲ್ಲಿನ ಮಾತುಕತೆಯಿಂದ ಸ್ಪಷ್ಟವಾಗುತ್ತದೆ.
ಈ ನಡುವೆ ನಿಷೇಧಾಜ್ಞೆಯನ್ನು ನಿರ್ಲಕ್ಷಿಸಿ ಇಂದು ಹಿಂಸಾತ್ರಸ್ತ ಮಂದ್ಸೌರ್ ಜಿಲ್ಲೆಯನ್ನು ಪ್ರವೇಶಿಸಿಸಲು ಯತ್ನಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಪೊಲೀಸರು ರಾಜಸ್ಥಾನದ ಗಡಿಗೆ ತಾಗಿಕೊಂಡಿರುವ ನೀಮುಚ್ ಜಿಲೆಲಯಲ್ಲಿ ಬಂಧಿಸಿದ್ದಾರೆ.
ಇದೇ ಜೂನ್ 1ರಿಂದ ಮಧ್ಯಪ್ರದೇಶದಲ್ಲಿನ ರೈತರು ಸಾಲ ಮನ್ನಾ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು ಕಳೆದ ಮಂಗಳವಾರ ಪೊಲೀಸ್ ಫೈರಿಂಗ್ಗೆ ಐವರು ರೈತರು ಬಲಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ