ಕಾಂಗ್ರೆಸ್ನ ಕನಿಷ್ಠ ಆದಾಯ ಸ್ಕೀಮ್ ಚುನಾವಣಾ ಗಿಮಿಕ್: ಯೋಗಿ ಆದಿತ್ಯನಾಥ್
Team Udayavani, Mar 26, 2019, 5:08 PM IST
ಗೋರಖ್ಪುರ : ‘ಕಾಂಗ್ರೆಸ್ ಪಕ್ಷದ ಕನಿಷ್ಠ ಆದಾಯ ಯೋಜನೆ ಕೇವಲ ಒಂದು ಚುನಾವಣಾ ಗಿಮಿಕ್ ‘ ಎಂದು ಟೀಕಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಸ್ ಪಿ ಮತ್ತು ಬಿಎಸ್ಪಿ ಜತೆಗೂಡಿ ಕಾಂಗ್ರೆಸ್ ಪಕ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ತಡೆಯುತ್ತಾ ಬಂದಿದೆ ಎಂದು ಆರೋಪಿಸಿದ್ದಾರೆ.
”ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಗರೀಬೀ ಹಠಾವೋ ಘೋಷಣೆಯನ್ನು ನೀಡಿತ್ತು. ಈಗ ಬಡವರಲ್ಲಿ ಕಡು ಬಡವರಿಗೆ ವರ್ಷಕ್ಕೆ 72,000 ರೂ. ಕನಿಷ್ಠ ಆದಾಯ ಒದಗಿಸುವುದಾಗಿ ಘೋಷಿಸಿರುವುದು ಚುನಾವಣಾ ಗಿಮಿಕ್” ಎಂದು ಆದಿತ್ಯನಾಥ್ ಅವರು ವಿಜಯ ಸಂಕಲ್ಪ ರಾಲಿಯಲ್ಲಿ ಭಾಷಣ ಮಾಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಕ್ಕಿರುವ ಅತೀ ದೊಡ್ಡ ಅಡೆತಡೆ ಎಂದರೆ ಕಾಂಗ್ರೆಸ್, ಎಸ್ಪಿ ಮತ್ತು ಬಿಎಸ್ಪಿ; ಕಾಂಗ್ರೆಸ್ ಪಕ್ಷವಂತೂ ರಾಮ ಮಂದಿರ ನಿರ್ಮಾಣ ತಡೆಯುವ ನಿಟ್ಟಿನಲ್ಲಿ ವಕೀಲರ ದೊಡ್ಡ ಸೇನೆಯನ್ನೇ ಮುಂದೆ ತಂದಿದೆ ಎಂದು ಆದಿತ್ಯನಾಥ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು