ಆರ್ ಡಿಎಕ್ಸ್ ಸ್ಫೋಟಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ ಸಂಚು; ಎನ್ಐಎ ತನಿಖೆ
Team Udayavani, Apr 1, 2022, 3:20 PM IST
ಹೊಸದಿಲ್ಲಿ: “ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆದಷ್ಟು ಬೇಗ ಕೊಲ್ಲುತ್ತೇನೆ. ಪ್ರಧಾನಿಯನ್ನು ಸ್ಫೋಟಿಸುತ್ತೇನೆ. ನಾನು ಯಾರನ್ನೂ ಬಿಡುವುದಿಲ್ಲ. 20 ಮಿಲಿಯನ್ ಗೂ ಹೆಚ್ಚು ಜನರನ್ನು ನಾನು ಕೊಲ್ಲುತ್ತೇನೆ” ಈ ರೀತಿಯ ಒಕ್ಕಣೆಯಿರುವ ಇಮೇಲ್ ಒಂದನ್ನು ಎನ್ ಐಎಗೆ ಕಳುಹಿಸಲಾಗಿದೆ.
ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ ಮುಂಬೈ ಕಚೇರಿಗೆ ಈ ರೀತಿಯ ಇ ಮೇಲ್ ಕಳುಹಿಸಲಾಗಿದೆ. ಫ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಗಿದೆ.
“ನನ್ನ ಬಳಿ 20ಕ್ಕೂ ಹೆಚ್ಚು ಆರ್ ಡಿಎಕ್ಸ್ ಸ್ಫೋಟಕಗಳಿವೆ. ನಾನು 20 ದೊಡ್ಡ ಸ್ಫೋಟಗಳನ್ನು ನಡೆಸಲು ಯೋಜನೆ ಮಾಡಿದ್ದೇನೆ. ಎಲ್ಲಾ 20 ಆರ್ ಡಿಎಕ್ಸ್ ಗಳನ್ನು ಪ್ರಮುಖ ನಗರಗಳಲ್ಲಿ ಇಡುತ್ತೇನೆ. ಆದಷ್ಟು ವೇಗ ಪಿಎಂ ಮೋದಿಯನ್ನು ಕೊಲ್ಲಬಯಸುತ್ತೇನೆ. ಆತ ನನ್ನ ಜೀವನವನ್ನು ಹಾಳು ಮಾಡಿದ್ದೇನೆ. ನಾನು ಪ್ರಧಾನಿಯನ್ನು ಸ್ಫೋಟಿಸುತ್ತೇನೆ. ನಾನು ಯಾರನ್ನೂ ಬಿಡುವುದಿಲ್ಲ. 20 ಮಿಲಿಯನ್ ಗೂ ಹೆಚ್ಚು ಜನರನ್ನು ನಾನು ಕೊಲ್ಲುತ್ತೇನೆ” ಎಂದು ಬರೆಯಲಾಗಿದೆ.
ಇದನ್ನೂ ಓದಿ:ದೇಶ್ ಮುಖ್ ವಿರುದ್ಧದ ಕೇಸ್; ಸುಪ್ರೀಂನಲ್ಲಿ ಮಹಾರಾಷ್ಟ್ರ ಸರ್ಕಾರಕ್ಕೆ ತೀವ್ರ ಮುಖಭಂಗ
ಮುಂದುವರಿದು, “ ಜನರು ಸಾಯುತ್ತಿದ್ದಾರೆ, ಹಾಗೆಯೇ ಅವರು ನನ್ನ ಬಾಂಬ್ ನಿಂದ ಸಾಯಲಿದ್ದಾರೆ. ನಾನು ಕೆಲವು ಉಗ್ರಗಾಮಿಗಳನ್ನು ಭೇಟಿಯಾಗಿದ್ದೇನೆ. ಅವರು ನನಗೆ ಆರ್ ಡಿಎಕ್ಸ್ ಸಹಾಯ ಮಾಡುತ್ತಿದ್ದಾರೆ. ಕೆಲವು ಬಾಂಬ್ ಗಳು ನನಗೆ ಸುಲಭದಲ್ಲಿ ಸಿಕ್ಕಿವೆ. ಇನ್ನು ನಾನು ಎಲ್ಲಾ ಕಡೆ ಸ್ಫೋಟಿಸುತ್ತೇನೆ. ನಿಮಗೆ ನನ್ನನ್ನು ತಡೆಯಲು ಆಗುವುದಾದರೆ ತಡೆಯಿರಿ, ಆದರೆ ಸ್ಫೋಟದ ಯೋಜನೆ ಮಾಡಿಯಾಗಿದೆ. ಸ್ಲೀಪರ್ ಸೆಲ್ ಗಳನ್ನು ಫೆ.28ರಿಂದಲೇ ಸಕ್ರಿಯ ಮಾಡಲಾಗಿದೆ” ಎಂದು ಎನ್ ಐಎ ಕಚೇರಿಗೆ ಅನಾಮಿಕ ವ್ಯಕ್ತಿಯಿಂದ ಇಮೇಲ್ ಬಂದಿದೆ.
ಎನ್ ಐಎ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
MUST WATCH
ಹೊಸ ಸೇರ್ಪಡೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್