ಅಪರಾಧಿಗಳ ಪರ ವಕೀಲರು ನನ್ನತ್ತ ಬೆರಳು ತೋರಿಸಿ ಅಪಹಾಸ್ಯ ಮಾಡಿದರು: ನಿರ್ಭಯಾ ತಾಯಿ


Team Udayavani, Jan 31, 2020, 8:24 PM IST

Ashadevi-Nirbhaya-Mother-730

ನವದೆಹಲಿ: ಎಲ್ಲವೂ ಅಂದುಕೊಂಡಂತೇ ನಡೆದಿದ್ದರೆ ನಾಳೆ ಬೆಳಗ್ಗಿನ ಸೂರ್ಯೋದಯಕ್ಕೂ ಮುನ್ನವೇ ನಿರ್ಭಯಾ ಅತ್ಯಾಚಾರಿ ಪಾಪಿಗಳಿಗೆ ನೇಣು ಕುಣಿಕೆ ಬಿಗಿದಾಗಿರುತ್ತಿತ್ತು ಮತ್ತು ನಿರ್ಭಯಾ ತಾಯಿ ಆಶಾದೇವಿ ಪಾಲಿಗೆ ನಾಳಿನ ಬೆಳಗು ಒಂದು ನಿರಮ್ಮಳ, ನಿಟ್ಟುಸಿರಿನ ಬೆಳಗಾಗುವ ಸಾಧ್ಯತೆಗಳೂ ಇದ್ದವು.

ಆದರೆ ಈ ನಾಲ್ವರು ಪಾತಕಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮಾ ರಾಷ್ಟ್ರಪತಿಗಳಿಗೆ ಕೊನೇ ಕ್ಷಣದಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಿರುವುದರಿಂದ ಅವರಿಗೆ ನಿಗದಿಯಾಗಿರುವ ಮರಣದಂಡನೆ ದಿನಾಂಕವನ್ನು ಮುಂದೂಡಬೇಕೆಂದು ಇವರ ವಕೀಲರು ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಮಾಡಿಕೊಂಡಿರುವ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ. ಈ ಮೂಲಕ ನಿರ್ಭಯಾ ಹಂತಕರು ನೇಣುಗಂಬಕ್ಕೇರುವ ದಿನ ಇನ್ನಷ್ಟು ದೂರವಾದಂತಾಗಿದೆ.

ಆದರೆ ಇದರಿಂದ ಬಹಳ ದುಃಖವಾಗಿದ್ದು ನಿರ್ಭಯಾ ತಾಯಿಗೆ. ತನ್ನ ಪುತ್ರಿಯನ್ನು ಚಿತ್ರಹಿಂಸೆ ಕೊಟ್ಟು ಕೊಂದ ಪಾಪಿಗಳು ಪ್ರತೀ ಸಲ ಒಂದಲ್ಲ ಒಂದು ಕಾನೂನು ಸೌಲಭ್ಯವನ್ನು ಬಳಸಿಕೊಂಡು ನ್ಯಾಯಾಲಯದ ಮೆಟ್ಟಿಲೇರುವಾಗಲೂ ಈ ತಾಯಿ ಅಲ್ಲೆಲ್ಲಾ ಹಾಜರಾಗುತ್ತಿದ್ದರು. ಮತ್ತು ಈ ಪಾಪಿಗಳಿಗೆ ಇಂದಲ್ಲ ನಾಳೆ ಗಲ್ಲು ಶಿಕ್ಷೆಯಾಗುವುದು ಖಚಿತ ಎಂಬ ಮನಸ್ಥಿತಿಯಲ್ಲೇ ಈ ತಾಯಿ ಪ್ರತೀಬಾರಿ ನ್ಯಾಯಾಲಯದ ಆವರಣದಿಂದ ಹೊರಬರುತ್ತಿದ್ದಾರೆ. ಆದರೆ ಇಷ್ಟು ದಿನವೂ ಈಕೆಗೆ ಸಿಕ್ಕಿದ್ದು ನಿರಾಶೆಯೇ.

ಅದಕ್ಕೂ ಮೇಲಾಗಿ ನಿರ್ಭಯಾ ಪಾತಕಿಗಳು ನೇಣುಗಂಬಕ್ಕೇರಲು ಇನ್ನೇನು ಒಂದು ದಿನವಷ್ಟೇ ಉಳಿದಿದೆ ಎಂಬಂತಿರುವಾಗಲೇ ಅವರ ಪರ ವಕೀಲರು ಆ ದಿನಾಂಕವನ್ನೇ ಮುಂದೂಡುವಲ್ಲಿ ಸಫಲರಾಗಿರುವುದು ಆಶಾದೇವಿಯ ಆತ್ಮಸ್ಥೈರ್ಯವನ್ನೇ ಉಡುಗಿಸಿದೆ. ಈ ನಡುವೆ ಇಂದು ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾದ ನಂತರ ಪಾತಕಿಗಳ ಪರ ವಕಿಲರು ತನ್ನತ್ತ ಬೆರಳು ತೋರಿಸಿ ಅಣಕಿಸಿದ್ದಾರೆ ಎಂಬ ಆರೋಪವನ್ನು ಆಶಾದೇವಿ ಮಾಡಿದ್ದಾರೆ.


‘ಪಾತಕಿಗಳ ಪರ ವಕೀಲರಾಗಿರುವ ಎ.ಪಿ.ಸಿಂಗ್ ಅವರು ಇಂದು ನನ್ನತ್ತ ಬೆರಳು ಮಾಡಿ ಸವಾಲು ಹಾಕಿದ್ದಾರೆ, ಮತ್ತು ತನ್ನ ಕಕ್ಷಿದಾರರ ಗಲ್ಲು ಶಿಕ್ಷೆ ಅನಿರ್ಧಿಷ್ಟ ಅವಧಿಯವರೆಗೆ ಮುಂದೂಡಿಕೆಯಾಗಿದೆ ಎಂದು ಆತ ನನಗೆ ಬೆರಳು ತೋರಿಸಿ ಹೇಳಿದರು’ (ಮುಜ್ರಿಮೋಮ್ ಕಿ ವಕೀಲ್ ಎ.ಪಿ.ಸಿಂಗ್ ನೇ ಮುಜ್ಹೇ ಆಜ್ ಉಂಗ್ಲೀ ದಿಖಾ ಕರ್ ಛಾಲೆಂಜ್ ಕಿಯಾ ಕಿ ಯೇ ಫಾಸಿ ಅಬ್ ಅನಂತ್ ಕಾಲ್ ತಕ್ ಟಾಲ್ ಗಯೀ ಹೈ) ಎಂದು ಆಶಾದೇವಿ ಅವರು ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನೋವಿನಿಂದ ಹೇಳಿದರು.

ಇಂದು ನನ್ನ ಭರವಸೆ ಛಿದ್ರವಾಗಿದೆ ಆದರೆ ನನ್ನ ಮಗಳ ಹೀನ ಸಾವಿಗೆ ಕಾರಣರಾದ ಪಾಪಿಗಳು ನೇಣುಗಂಬಕ್ಕೇರುವವರೆಗೆ ನನ್ನ ಹೋರಾಟ ಮುಂದುವರಿಯಲಿದೆ ಎಂದು ಆಶಾದೇವಿ ಅವರು ಹೇಳಿದರು.

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.